ಕಾಂಗ್ರೆಸ್ ಅಧ್ಯಕ್ಷರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಕರೆದ ಪ್ರಧಾನಿ ಮೋದಿ- ಕಾಂಗ್ರೆಸ್ ನದು ಇಟಾಲಿಯನ್ ಮನಸ್ಥಿತಿ ಎಂದ ನಡ್ಡಾ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಮತ್ತೆ ಹಿಂದಿನಂತೆ ಲಯ ಕಂಡುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಮೋದಿ ಕರೆದಿದ್ದಾರೆ. ಈ ಹಿಂದೆ ಭಿನ್ನ ಧ್ವನಿ ಎತ್ತುವವರನ್ನು ವಿಅಚಾರಿಕವಾಗಿ ಮಾತನಾಡುವವರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಬಿಜೆಪಿ ಮತ್ತು ಅದರ ಪರಿವಾರದ…

ಕೇಜ್ರೀವಾಲ್ ಬಂಧನ; ದೇಶ ವಿದೇಶಗಳಲ್ಲಿ ಪ್ರತಿಭಟನೆ, ಆಸ್ಟ್ರ‍ೇಲಿಯಾ, ಇಂಗ್ಲೆಂಡ್, ಅಮೇರಿಕದಲ್ಲಿ ರಸ್ತೆಗಿಳಿದ ಪ್ರತಿಭಟನಾಕಾರರು

ನವದೆಹಲಿ : ಪ್ರಾಯಶಃ ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಈಗ ದೇಶ ವಿದೇಶಗಳಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಇಂದು ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಿತು. ಆಮ್ ಆದ್ಮಿ ಪಾರ್ಟಿಯ ಆಡಳಿತ ಇರುವ ಪಂಜಾಬ್ ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.…

ಎಲ್ಲವನ್ನೂ ಕಳಚಿ ನಿಂತ ಈಶ್ವರಪ್ಪ; ನಾನು ಕೇಂದ್ರ ನಾಯಕರ ಜೊತೆ ಮಾತನಾಡಬೇಕು ಎಂದು ಹೇಳಲು ನಿನಗೆ ಅಧಿಕಾರ ಕೊಟ್ಟವರು ಯಾರು ? ವಿಜಯೇಂದ್ರ ಗೆ ಚಾಟಿಏಟು

ಶಿವಮೊಗ್ಗ; ಬಿಜೆಪಿಯ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಎಲ್ಲವನ್ನೂ ಕಳಚಿ ನಿಂತಂತೆ ಕಾಣುತ್ತಿದೆ. ಅವರು ಸವಾಲುಗಳ ಮೇಲೆ ಸವಾಲು ಹಾಕುತ್ತಿದ್ದಾರೆ. ಇದೆಲ್ಲ ಒಂದೆರಡು ದಿನ, ನಂತರ ತಣ್ಣಗಾಗುತ್ತಾರೆ, ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದು ಸುಳ್ಳಾಗಿದೆ. ಇವತ್ತು ಅವರದು ಹೊಸ ವರಸೆ. ನಿಮ್ಮ ಸಹೋದರನನ್ನು ಶಿವಮೊಗ್ಗ ಕ್ಷೇತ್ರದಿಂದ ಹಿಂದಕ್ಕೆ ಕರೆಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸವಾಲು…

ಈ ಅವಿವಾಹಿತ ಯುವಕನಿಗೆ ಒಬ್ಬಂಟಿ ಮೋದಿಯೇ ದೇವರು : ಮೋದಿ ಪ್ರಧಾನಿಯಾಗಲಿ ಎಂದು ಕಾಳಿ ಮಾತೆಗೆ ಕೈಬೆರಳು ಅರ್ಪಿಸಿದ ಅಭಿಮಾನಿ

ಕಾರವಾರ : ಅಭಿಮಾನ ಅನ್ನೋದು ಒಂದು ಹುಚ್ಚು. ಯಾವನು ತನ್ನ ವ್ಯಕ್ತಿತ್ವನ್ನು ಕಳೆದುಕೊಳ್ಳುತ್ತಾನೋ ಅವನು ಇನ್ಯಾರದೋ ಅಭಿಮಾನಿಯಾಗಿರ್ತಾನೆ. ಅಭಿಮಾನಿಗಳಿಗೆ ಬಹುತೇಕ ಸಂದರ್ಭದಲ್ಲಿ ತಾರತಮ್ಯ ಜ್ಞಾನ ಇರೋದಿಲ್ಲ. ಹೀಗಾಗಿ ಅವರ ಏನು ಮಾಡೋದಕ್ಕೂ ಸಿದ್ದರಿರ್ತಾರೆ. ಇಂತಹ ಸುದ್ದಿಯೊಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಬಂದಿದೆ, ಈ ಸ್ಟೋರಿಯ ನಾಯಕ ನರೇಂದ್ರ ಮೋದಿ ಅಭಿಮಾನಿ. ಮೋದಿ ಮತ್ತೆ ಪ್ರಧಾನಿಯಾಗಬೇಕು…

BBC INDIA ನ್ಯೂಸ್ ರೂಂ ಬಂದ್; ಭಾರತೀಯರ ಮಾಲಿಕತ್ವದ ಹೊಸ ಕಂಪೆನಿ ಪ್ರಾರಂಭ, 1940 ರಲ್ಲಿ ಪ್ರಾರಂಭವಾಗಿದ್ದ ಬಿಬಿಸಿ ಕೊನೆ ಉಸಿರು..

ನವದೆಹಲಿ: ಪತ್ರಿಕೋದ್ಯಮದ ಇನ್ನೊಂದು ಹೆಸರು BBC. ಇದು ಈಗ ಭಾರತದಲ್ಲಿ ತನ್ನ ನ್ಯೂಸ್ ರೂಂ ಅನ್ನು ಸ್ಥಗಿತಗೊಳಿಸುತ್ತಿದೆ. BBCಯ ಮೇಲೆ ನಡೆಸಿದ ತೆರಿಗೆ ದಾಳಿ ಮತ್ತು ಎಫ್ ಡಿ ಐ ಬಗ್ಗೆ ನಡೆಸುತ್ತಿರುವ ಸತತ ವಿಚಾರಣೆಯಿಂದ ಬಿಬಿಸಿ ಈ ನಿರ್ಧಾರವನ್ನು ಕೈಗೊಂಡಿದೆ. ಪ್ರತಿಶತ 100 ರಷ್ಟು ವಿದೇಶಿ ಬಂಡವಾಳ ಹೂಡಿಕೆಯ ನ್ಯೂಸ್ ರೂಂ ಗೆ ಬದಲಾಗಿ…

ಮೀನು ಮತ್ತು ಚಿಪ್ಸ್ ನನ್ನ ಧೀರ್ಘಾಯುಷ್ಯದ ಗುಟ್ಟು; ವಿಶ್ವದ ಹಿರಿಯಜ್ಜ ಜಾನ್ ಅಲ್ಫ್ರೇಡ್

ನವದೆಹಲಿ : ಜಗತ್ತಿನ ಅತಿ ಹಿರಿಯ ಈ ವ್ಯಕ್ತಿ. ಹಿರಿಯಜ್ಜ. ಇವರಿಗೆ ಅತಿ ಹೆಚ್ಚು ವಯಸ್ಸು. ಅಧಿಕೃತ ದಾಖಲೆಯ ಪ್ರಕಾರ ಇವರಿಗೆ 111 ವರ್ಷ. ಇವರು ಹುಟ್ಟಿದ್ದು 1912 ಆಗಸ್ಟ್ 26 ರಂದು. ಟೈಟಾನಿಕ್ ಹಡಗು ಮುಳುಗಿದ್ದು ಗೊತ್ತಲ್ಲ ? ಈ ಹಡಗು ಮುಳುಗಿದ ಸ್ವಲ್ಪ ಕಾಲದಲ್ಲೇ ಇವರು ಹುಟ್ಟಿದ್ದು.ಇವರ ಹೆಸರು ಜಾನ್ ಅಲ್ಫ್ರೇಡ್ ಟಿನ್ನೀಸ್…

ಭಾರತದ ಚುನಾವಣೆಯಲ್ಲಿ ಪಾಕಿಸ್ಥಾನವನ್ನು ಎಳೆದು ತಂದ ಬಿಜೆಪಿ ನಾಯಕರು. ಪಾಕಿಸ್ಥಾನ ಇಲ್ಲದಿದ್ದರೆ ಈ ಪಕ್ಷವೇ ಇರುತ್ತಿರಲಿಲ್ಲ..!

ನವದೆಹಲಿ : ಭಾರತದಲ್ಲಿ ಚುನಾವಣೆ ಬಂದಾಗ ಪಾಕಿಸ್ಥಾನ ಬೇಕೇ ಬೇಕು. ಪಾಕಿಸ್ಥಾನ ಇಲ್ಲದಿದ್ದರೆ ಬಿಜೆಪಿ ಚುನಾವಣೆಗೆ ಸ್ಪರ್ಧಿಸುತ್ತಲೇ ಇರಲಿಲ್ಲ. ಇಲ್ಲ ಆ ಪಕ್ಷದ ವಿಸರ್ಜನೆ ಆಗುತ್ತಿತ್ತೇನೋ..! ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪಾಕಿಸ್ಥಾನದ ಪ್ರಸ್ತಾಪ ಆಗಿಲ್ಲ ಯಾಕೆ ಎಂಬ ಪ್ರಶ್ನೆ ಕಾಡುತ್ತಿರುವಾಗಲೇ ಭಾರತೀಯ ಚುನಾವಣಾ ಆಖಾಡಾವನ್ನು ಪಾಕಿಸ್ಥಾನ ಪ್ರವೇಶಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಹೆಸರು…

ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯನೇ ಅತಿ ಶ್ರೀಮಂತ ದೇವರು- ಈ ವರ್ಷ ಈ ದೇವಾಲಯದ ಆದಾಯ 146 ಕೋಟಿ..!

ಮಂಗಳೂರು : ರಾಜ್ಯದ ದೇವಾಲಯಗಳು ಭಕ್ತಿಯ ಜೊತೆಗೆ ಆದಾಯದ ಕೇಂದ್ರಗಳು. ದೇವರ ದರ್ಶನಕ್ಕೇ ಹೋಗುವವರು ದರ್ಶನ ಆದ ಮೇಲೆ ದೇವರ ಹುಂಡಿಗೆ ದುಡ್ದು ಹಾಕುತ್ತಾರೆ. ಅರ್ಚಕರ ಆರತಿ ತಟ್ಟೆಗೂ ಹಣ ಹಾಕಿ ಭಕ್ತಿ ಪ್ರದರ್ಶಿಸುತ್ತಾರೆ. ಕರ್ನಾಟಕದಲ್ಲಿ ಭಕ್ತರನ್ನು ಆಕರ್ಷಿಸುವ ಹಲವಾರು ದೇವಾಲಯಗಳಿವೆ. ಇವುಗಳಲ್ಲಿ ಬಹಳಷ್ಟು ದೇವಾಲಯಗಳು ಮುಜರಾಯಿ ಇಲಾಖೆಗೆ ಸೇರಿದವು. 2023 ಮತ್ತು 2024ನೇ ಸಾಲಿನ…

ಅವಮಾನಕರ ಸೋಲು ಅನುಭವಿಸಿದ ಆರ್ ಸಿ ಬಿ; ಗೆಲ್ಲುವುದನ್ನೇ ಮರೆತು ಬಿಟ್ಟ ಬೆಂಗಳೂರು ತಂಡ !

ಜೈಪುರ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸೋಲಿನ ಸರಮಾಲೆಯನ್ನು ಮುಂದುವರಿಸಿದೆ. ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಿನ್ನೆ ಅವಮಾನಕರ ಸೋಲು ಅನುಭವಿಸಿತು. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಆಟದ ಎಲ್ಲ ವಿಭಾಗಗಳಲ್ಲೂ ಮುಗ್ಗರಿಸಿತು. ಇಡೀ ಪಂದ್ಯದಲ್ಲಿ ಒಂದೇ ಒಂದು ಆಶಾದಾಯಕ ಅಂಶ ಎಂದರೆ ವಿರಾಟ್ ಕೊಯ್ಲಿ ಅವರ ಶತಕ ಮಾತ್ರ.…