ಕಂಗನಾ, ಸ್ವಲ್ಪ ಇತಿಹಾಸ ಓದಮ್ಮ, ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಅಲ್ಲ…!

ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947 ರಲ್ಲಿ ಅಲ್ಲ. 2014 ರಲ್ಲಿ. ಈ ಹೇಳಿಕೆ ನೀಡಿದ ಮಹಾತಾಯಿ ಈಕೆ..ಸದಾ ಒಂದಿಲ್ಲೊಂದು ಇಂತಹ ಹೇಳಿಕೆ ನೀಡಿ ಪ್ರಚಾರ ಪಡೆಯುವ ನಟಿ. ಬಿಜೆಪಿಯ ನಾಯಕಿ. ಈಗ ಆಕೆ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾಳೆ. ಇಂತಹ ಬುದ್ದಿ ಇಲ್ಲದ ಹೇಳಿಕೆ ನೀಡುವ ಕಂಗನಾ ಎಂದರೆ ಬಿಜೆಪಿ ನಾಯಕರಿಗೆ ಇಷ್ಟ.…

ಪಾಕಿಸ್ತಾನದಲ್ಲಿ ಭಾರತದ ಟಾರ್ಗೆಟ್ ಕಿಲ್ಲಿಂಗ್; ಗಾರ್ಡಿಯನ್ ಪತ್ರಿಕೆಯ ತನಿಖಾ ವರದಿ: ವರದಿಯನ್ನು ಅಲ್ಲಗಳೆದ ಭಾರತ

ನವದೆಹಲಿ : ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಹತ್ಯಾ ಪ್ರಕರಣಗಳಲ್ಲಿ ಭಾರತದ ಕೈವಾಡವಿದೆ ಎಂಬ ಆರೋಪವನ್ನು ಭಾರತ ತಳ್ಳಿ ಹಾಕಿದೆ. ಈ ಕುರಿತು ಇಂಗ್ಲಂಡಿನ ಗಾರ್ಡಿಯನ್ ಪತ್ರಿಕೆಯಲ್ಲಿ ಬಂದ ವರದಿಯನ್ನು ವಿದೇಶಾಂಗ ಇಲಾಖೆ ತಳ್ಳಿ ಹಾಕಿದೆ. ಗಾರ್ಡಿಯನ್ ಪತ್ರಿಕೆಯಲ್ಲಿ ಬಂದ ವರದಿಯಲ್ಲಿ 2019 ರ ಪುಲ್ವಾಮಾ ಘಟನೆಯ ನಂತರ ಪಾಕಿಸ್ಥಾನದಲ್ಲಿ ಟಾರ್ಗೆಟ್ ಕಿಲ್ಲಿಂಗ್ ನಡೆಯತೊಡಗಿತು. ಇದರಲ್ಲಿ ಭಾರತದ ಕೈವಾಡವಿತ್ತು…

ಬಿಜೆಪಿ ಜೊತೆ ಮೈತ್ರಿ. ಚೆನ್ನಪಟ್ಟಣದಲ್ಲಿ ಗುಳೆ ಹೊರಟ ಜೆಡಿಎಸ್ ನಾಯಕರು: ಕುಮಾರಸ್ವಾಮಿಗೆ ಆಘಾತ !

ಬೆಂಗಳೂರು : ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಗೆ ದಾರಿ ಸುಲಭವಿದ್ದಂತೆ ಕಾಣುತ್ತಿಲ್ಲ. ಹಳೇ ಮೈಸೂರು ಪ್ರದೇಶದಲ್ಲಿ ಬಲಿಷ್ಟವಾಗಿರುವ ಜೆಡಿಎಸ್ ಗೆ ಈ ಹೊಸ ಸಂಬಂಧ ಅಲ್ಲಲ್ಲಿ ಕೈಕೊಡುತ್ತಿದೆ. ಮೊದಲನೆಯದಾಗಿ ಕಾರ್ಯಕರ್ತರ ಮಟ್ಟದಲ್ಲಿ ಹೊಂದಾಣಿಕೆ ಸುಲಭವಾಗಿಲ್ಲ. ಇಷ್ಟು ವರ್ಷಗಳ ಕಾಲ ಪರಸ್ಪರ ಹೋರಾಟ ಮಾಡಿಕೊಂಡು ಬಂದವರು ಎಲ್ಲವನ್ನೂ ಮರೆತು ಒಂದಾಗುವುದು ಸುಲಭವಲ್ಲ. ಅದೇ ಈಗ…

ಪಂಜಾಬ್ ಬಲ್ಲಾ…ಬಲ್ಲಾ.. ರೋಚಕ ಜಯ. ಸೋತು ನೆಲ ಕಚ್ಚಿದ ಗುಜರಾತ್.

ಅಹ್ಮದಾಬಾದ್; ದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಗುಜರಾತ್ ಟೈಟನ್ಸ್ ನೀಡಿದ 200 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ 19.5 ಓವರ್…

ಭಾರತದಲ್ಲಿ ನ್ಯಾಯಸಮ್ಮತ ಮುಕ್ತ ಚುನಾವಣೆ ನಡೆಯುತ್ತದೆ, ವಿಶ್ವಸಂಸ್ಥೆಗೆ ಹೇಳಿಕೆಗೆ ತಿರುಗೇಟು ನೀಡಿದ ವಿದೇಶಾಂಗ ಸಚಿವ ಜೈಶಂಕರ್..

ನವದೆಹಲಿ : ಭಾರತದಲ್ಲಿ ನಡೇಯುತ್ತಿರುವ ಚುನಾವಣೆಯ ಬಗ್ಗೆ ವಿಶ್ವ ಸಂಸ್ಥೆ ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ತೀವ್ರ ರೂಪದ ಪ್ರತಿಕ್ರಿಯೆ ನೀಡಿದ್ದಾರೆ, ಭಾರತದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಎಂದು ವಿಶ್ವ ಸಂಸ್ಥೆ ಹೇಳಿತ್ತು. ಇದು ಭಾರತವನ್ನು ಕೆರಳಿಸಿದೆ. ನಿನ್ನೆ ತಿರವನಂತಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಜೈಶಂಕರ್ ಈ ಹೇಳಿಕೆಗೆ ಪ್ರತಿಕ್ರಿಯೆ…

ಚೀನಾ ಭಾರತದ ಭೂ ಪ್ರದೇಶದ ಒಳಗೆ ಪ್ರವೇಶಿಸಿ ನಮ್ಮ ಭೂ ಭಾಗವನ್ನು ಕಬಳಿಸಿದಾಗ ನೀವು ನಿದ್ರೆ ಮಾತ್ರೆ ತೆಗೆದುಕೊಂಡು ಮಲಗಿದ್ರಾ ? ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ ಖರ್ಗೆ

ನವದೆಹಲಿ : ಚೀನಾ ಭಾರತದ ಭೂ ಪ್ರದೇಶದ ಒಳಗೆ ಪ್ರವೇಶಿಸಿ ನಮ್ಮ ಪ್ರದೇಶವನ್ನು ಕಬಳಿಸಿದೆ. ಈ ಸಂದರ್ಭದಲ್ಲಿ ತಾವು ಏನು ಮಾಡುತ್ತಿದ್ದಿರಿ. ನಿದ್ರೆ ಮಾತ್ರೆ ಅಥವಾ ಮಾದಕ ವಸ್ತು ತೆಗೆದುಕೊಂಡು ನಿದ್ರೆ ಮಾಡುತ್ತಿದ್ರಾ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಭಾರತದ ಅರುಣಾಚಲ ಪ್ರದೇಶದ ಕೆಲ ಭಾಗಗಳಿಗೆ ಚೀನಾ…

ಮೋದಿಯವರೇ? ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು ? ಪ್ರಧಾನಿ ಮೋದಿಯವರಿಗೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು : ಮಿಸ್ಟರ್ ಮೋದಿಯವರೇ? ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು, ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಶಾಸಕರುಗಳಿಗೆ ಕೋಟಿ ಕೋಟಿ ಕೊಡುವುದಕ್ಕೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು. ಅದು ಕಪ್ಪು ಹಣ ಅಲ್ಲವೇ ದೇಶದ ಜನಕ್ಕೆ ಉತ್ತರಿಸಿ. ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿಯವರಿಗೆ ಈ ಪ್ರಶ್ನೆ ಕೇಳಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಚಿತ್ರದುರ್ಗ ಲೋಕಸಭಾ…

ನಾಳೆ ಸುಮಲತಾ ಬಿಜೆಪಿ ಸೇರ್ಪಡೆ: ಕುಮಾರಣ್ಣನಿಗೆ ನೀಡಲಾಗುವುದೇ ಆಹ್ವಾನ ?

ಬೆಂಗಳೂರು : ಸಂಸದೆ ಸುಮಲತಾ ಅಂಬರೀಶ್ ನಾಳೆ ಬೆಳಿಗ್ಗೆ 11.30 ಕ್ಕೆ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ,ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಬಿಜೆಪಿಯ ಹಿರಿಯ ನಾಯಕರೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಜೆಡಿಎಸ್ ನಾಯಕರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ್ ಇದೆಯೋ ಇಲ್ಲವೀ ತಿಳಿಯದು. ಹಾಗೆಯೇ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿರುವ ಎಚ್.ಡಿ. ಕುಮಾರಸ್ವಾಮಿ…

ತಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಿಯೇ ಬಿಟ್ಟ ನಿಖಿಲ್, ಅಜ್ಜ ಅಪ್ಪರಂತೆ ನಿಖಿಲ್ ಕೂಡ ಹಾಕಿದರು ಕಣ್ಣೀರು..!

ಬೆಂಗಳೂರು : ದೇವೇಗೌಡರ ಕುಟುಂಬದ ಪರಂಪರೆ ಅದು. ಈ ಪರಂಪರೆಯನ್ನು ಪ್ರಾರಂಭಿಸಿದವರು ಸನ್ಮಾನ್ಯ ದೇವೇಗೌಡರು. ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದಾಗ. ಪ್ರಧಾನಿ ಹುದ್ದೆಯನ್ನು ಕಳೆದುಕೊಂಡಾಗ ಅವರ ಕಣ್ಣಿನಲ್ಲಿ ನೀರು ಬಂದಿತ್ತು ಈ ಪರಂಪರೆಯನ್ನು ಕುಮಾರಸ್ವಾಮಿ ಅವರು ಮುಂದುವರಿಸಿದರು. ಬಿಜೆಪಿ ತಮಗೆ ಮೋಸ ಮಾಡಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದಾಗ ಅವರು ಕಣ್ಣೀರು ಹಾಕಿದ್ದರು. ನಂತರ ಹಲವು ಸಂದರ್ಭದಲ್ಲಿ…