Category ದೇಶ

ತನ್ನ ಮಗನ ಸೋಲಿಗೆ ಹಾರೈಸಿದ ಅಪ್ಪ- ಮಗ ಪ್ರತಿನಿಧಿಸುವ ಪಕ್ಷವೂ ಗೆಲ್ಲದಿರಲಿ ಎಂದ ಅಪರೂಪದ ರಾಜಕಾರಣಿ…

ನನ್ನ ಮಗ ಸೋಲಬೇಕು, ಅವರ ಪಕ್ಷವೂ ಗೆಲ್ಲಕೂಡದು. ಕಾಂಗ್ರೆಸ್ ನಾಯಕರ ಮಕ್ಕಳು ಬಿಜೆಪಿ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ

ಅರವಿಂದ್ ಕೇಜ್ರಿವಾಲ್ ಗೆ ರಿಲೀಫ್ ನೀಡದ ದೆಹಲಿ ಹೈಕೋರ್ಟ್; ದೆಹಲಿಯಲ್ಲಿ ಜಾರಿಗೆ ಬರುವುದೇ ರಾಷ್ಟ್ರಪತಿ ಆಡಳಿತ ?

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಜಾಮೀನು ನೀಡುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ಈಗ ಅವರಿಗೆ ಇರುವ ದಾರಿ ಎಂದರೆ ಜಾಮೀನು ಕೋರಿ ಸುಪ್ರೀಂ ಕೋರ್ಟಿಗೆ ಹೋಗುವುದು ಮಾತ್ರ.ಇದರ ನಡುವೆ ದೆಹಲಿ ಹೈಕೋರ್ಟ್ ತನ್ನ ಆಬ್ಸರ್ವೇಶನ್ ನಲ್ಲಿ ಹಲವು ಅಂಶಗಳ ಬಗ್ಗೆ ಅಭಿಪ್ರಾಯಗಳನ್ನು…

ಗುಜರಾತಿನಲ್ಲಿ ಬಿಜೆಪಿ ವಿರುದ್ಧ ತಿರುಗಿ ಬಿದ್ದ ರಜಪೂತರು- ಕ್ಷತ್ರಿಯರ ಈ ಕೋಪ ಉತ್ತರ ಮತ್ತು ಮಧ್ಯ ಭಾರತದಲ್ಲಿ ಬಿಜೆಪಿಗೆ ಮುಳುವಾಗುವುದೇ ?

ಅಹಮದಾಬಾದ್ : ಎರಡು ದಿನಗಳ ಹಿಂದೆ ಗುಜರಾತ್ ನ ರಾಜಕೋಟ್ ದಲ್ಲಿ ನಡೆದಿದ್ದು ಭಾರಿ ಪ್ರತಿಭಟನೆ. ಉತ್ತರ ಪ್ರದೇಶದಲ್ಲೂ ಕ್ಷತ್ರಿಯ ಪಂಚಾಯತ್. ಇವರ ತೀರ್ಮಾನ ಒಂದೇ ಈ ಬಾರಿ ಯಾವ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡಕೂಡದು. ಇದು ತುಂಬಾ ಮಹತ್ವದ ಬೆಳವಣಿಗೆ. ಆದರೆ ನಮ್ಮ ಯಾವ ಮಾಧ್ಯಮದಲ್ಲೂ ಈ ಕುರಿತ ವರದಿ ಬರಲೇ ಇಲ್ಲ.ಗುಜರಾತಿಅನ್ ಕ್ಷತ್ರಿಯರದು…

ಕೆನಡಾದಲ್ಲಿ ಬೂಟಾ ಸಿಂಗ್ ಎಂಬ ಭಾರತೀಯ ಮೂಲದ ಉದ್ಯಮಿ ಹತ್ಯೆ- ಕಾರಣ ನಿಗೂಢ..

ಟೊರೊಂಟೊ ; ಭಾರತದ ಮೂಲದ ಬಿಲ್ಡರ್ ಒಬ್ಬರು ಕೆನಡಾದಲ್ಲಿ ಹತ್ಯೆಯಾಗಿದ್ದಾರೆ. ಅವರ ಮೇಲೆ ಗುಂಡಿನ ದಾಳಿ ನಡೆಯಿತು. ಈ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿಯೂ ಅಸು ನೀಗಿದರು ಎಂದು ವರದಿ ತಿಳಿಸಿದೆ. ಕೆನಡಾದ ಎಡ್ ಮೊಂಟಾನ್ ನ ಸಿಖ್ ಗುರುಧ್ವಾರದಲ್ಲಿ ಅವರು ಪ್ರಮುಖ ವ್ಯಕ್ತಿಯಾಗಿದ್ದರು. ಇವರು ತಮ್ಮ ನಿರ್ಮಾಣ ಕಾಮಗಾರಿಯ ಸೈಟ್ ನಲ್ಲಿದ್ದಾಗ ಈ ಹತ್ಯೆ ನಡೆಯಿತು…

ಪಾಕಿಸ್ಥಾನದಲ್ಲಿ ಭಾರತ ಟಾರ್ಗೆಟ್ ಕಿಲ್ಲಿಂಗ್ ನಡೆಸುತ್ತಿದೆ ಎಂಬ ಆರೋಪದಲ್ಲಿ ನಾವು ಮಧ್ಯ ಪ್ರವೇಶ ಮಾಡುವುದಿಲ್ಲ; ಅಮೇರಿಕ

ನವದೆಹಲಿ : ಪಾಕಿಸ್ಥಾನದಲ್ಲಿ ಭಾರತ ಟಾರ್ಗೆಟ್ ಕಿಲ್ಲಿಂಗ್ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಾವು ಮಢ್ಯ ಪ್ರವೇಶ ಮಾಡುವುದಿಲ್ಲ. ಎರಡೂ ದೇಶಗಳು ಮಾತುಕತೆಯ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು . ಈ ವಿಚಾರದಲ್ಲಿ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಮೇರಿಕ ಹೇಳಿದೆ. ಬ್ರೀಟೀಷ್ ಪತ್ರಿಕೆ ಗಾರ್ಡಿಯನ್ ಈ ಸಂಬಂಧ ವರದಿಯೊಂದನ್ನು ಪ್ರಕಟಿಸಿತ್ತು. ಈ ವರದಿಯಲ್ಲಿ ಪಾಕಿಸ್ಥಾನದಲ್ಲಿ…

ಮತ್ತೆ ಬಂತು ಯುಗಾದಿ… ಬದುಕಿನಲ್ಲಿ ಸಿಹಿ ಕಹಿ ಎರಡೂ ಇರಲಿ..ಬದುಕಿನ ರಥ ಮುಂದಕ್ಕೆ ಮುಂದಕ್ಕೆ ಸಾಗಲಿ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ….. ನಿಜ ಪ್ರತಿ ವರ್ಷಯುಗಾದಿ ಬರುತ್ತದೆ. ಯುಗಾದಿ ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಮೊದಲ ದಿನ. ಈ ಹಬ್ಬದ ಆಚರಣೆಯೂ ವಿಶಿಷ್ಟ. ಪ್ರಾಯಶ: ವಿಶ್ವದ ಎಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಈ ರೀತಿ ಇರುವುದಿಲ್ಲ. ಹೊಸ ವರ್ಷಕ್ಕೆ ಹೊಸತನ್ನು ಸ್ವಾಗತಿಸುವ ಸಂಭ್ರಮ. ಹಾಗೆ ಬದುಕು ಎಂದರೆ ಸಿಹಿ…

ಲಂಬೂಜಿ, ಗುಡ್ಡಿ ದಾಂಪತ್ಯ, ಪ್ರೀತಿ ಪ್ರೇಮ ಜಗಳ..ಜಯಾಜಿ ಆಪ್ ಕೋ ಜನ್ಮ ದಿನ್ ಕಾ ಶುಭ್ ಕಾಮನಾ…

ಅವಳು ಗುಡ್ಡಿ. ಗಿಡ್ಡಿಯೂ ಹೌದು. ಚೋಟಿ.. ಆತ ಲಂಬೂಜಿ. ಅವರ ಪ್ರೀತಿ ದಾಂಪತ್ಯ ೫೦ ವರ್ಷಗಳನ್ನು ಪೂರೈಸಿದೆ, ಈ ಅವಧಿಯಲ್ಲಿ ಅವರು ಪ್ರೀತಿಸಿದ್ದಾರೆ. ಜಗಳವಾಡಿದ್ದಾರೆ. ಲಂಬೂಜಿಯ ಪ್ರೇಮ ಪ್ರಕರಣಗಳು ಹಲವು ಸಂದರ್ಭಗಳು ಅವಳನ್ನು ಹೈರಾಣಾಗಿಸಿದೆ. ಆದರೆ ಎಂದೂ ಪ್ರೀತಿಯ ದೀಪ ಆರಿಲ್ಲ.ಪ್ರೀತಿಯ ದಿನಗಳು. ನಂತರ ದಾಂಪತ್ಯ. ಹಲವು ನೆನಪುಗಳು. ಕೆಲವು ಸಿಹಿ. ಕೆಲವು ಕಹಿ. ಆದರೂ…

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಕಾಂಗ್ರೆಸ್ ಎಂದರೆ ಹಾಗಲಕಾಯಿಯಂತೆ….!ದೇಶಕ್ಕೆ ಸಿಹಿ ಮೂತ್ರ ರೋಗವನ್ನು ಹಿಡಿಸಿರುವಾಗ ಹಾಗಲಕಾಯಿ ಬೇಕಲ್ಲವೆ ?

ಕಾಂಗ್ರೆಸ್ ಪಕ್ಷ ಎಂದರೆ ಹಾಗಲ ಕಾಯಿ ಇದ್ದಂತೆ. ಅದನ್ನು ಯಾವುದರ ಜೊತೆಗೆ ಸೇರಿಸಿದರೂ ಅದರ ಕಹಿ ಹೋಗುವುದಿಲ್ಲ.ಈ ಮಾತು ಹೇಳಿದವರು ಈ ದೇಶದ ಪ್ರಧಾನಿ ನರೇಂದ್ರ ಮೋದಿ. ನಿನ್ನೆ ಮಹಾರಾಷ್ಟ್ರ‍ದಲ್ಲಿ ಮೊದಲ ಚುನಾವಣಾ ಪ್ರಚಾರ ಭಾಷಣ ಮಾಡಿದ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು.ಹಾಗಲ ಕಾಯಿ ಕಹಿ ಇರಬಹುದು. ಆದರೆ ಆರೋಗ್ಯಕ್ಕೆ ತುಂಬ ಒಳ್ಳೆಯದು. ಸಕ್ಕರೆ ಕಾಯಿಲೆಗೆ…

ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ನಾಶ; ಕೇರಳ ಸಿಎಂ ಪಿಣರಾಯಿ ವಿಜಯನ್ ಆತಂಕ

ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯ ಸಂಪೂರ್ಣವಾಗಿ ಮರೆಯಾಗಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಂಘ ಪರಿವಾರದ ವಿರುದ್ಧ ಬರೆಯುವ ಪತ್ರಕರ್ತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾ ಅವರು, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ನಿರಂತರವಾಗಿ ಕುಸಿಯುತ್ತಿದೆ.…

ಮುಸ್ಲೀಮ್ ಲೀಗ್ ಆರೋಪ; ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಅಯೋಗಕ್ಕೆ ಕಾಂಗ್ರೆಸ್ ದೂರು. ಮೋದಿಯವರಿಂದ ಶ್ಲಾಘನೆಗೆ ಒಳಗಾಗಿರುವ ಚುನಾವಣಾ ಅಯೋಗ ಈ ದೂರನ್ನು ಏನು ಮಾಡಬಹುದು ?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮುಸ್ಲಿಂ ಲೀಗ್ ಟೀಕೆಯ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿದೆ. ಅಜ್ಮೀರ್ ನ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸುಳ್ಳುಗಳ ಬಂಡಲ್. ಈ ಪ್ರಣಾಳಿಕೆಯ ಪ್ರತಿ ಪುಟ ದೇಶವನ್ನು ತುಂಡು ತುಂಡಾಗಿ ಒಡೆಯುವ ಯತ್ನ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷದ…