ಆಸ್ಸಾಂ ನಲ್ಲಿ ಮುಸ್ಲೀಂ ರನ್ನು ಓಟಿಗಾಗಿ ಓಲೈಸುವ ಕೆಲಸವನ್ನು ಬಿಜೆಪಿ ಪ್ರಾರಂಭಿಸಿದೆ ಎಂದು ಬಿಜೆಪಿ ಮಾಜಿ ರಾಜ್ಯ ಘಟಕದ ಅಧ್ಯಕ್ಷ ಮಾಜಿ ಕೇಂದ್ರ ಸಚಿವ ರಾಜೆನ್ ಗೋಹೆನ್ ತಮ್ಮ ಪಕ್ಷದ ವಿರುದ್ಧವೇ ಆರೋಪಿಸಿದ್ದಾರೆ.
ಚುನಾವಣೆ ಗೆಲ್ಲುವುದೊಂದೆ ಇಂದಿನ ನಾಯಕರಿಗೆ ಮುಖ್ಯವಾಗಿದೆ. ಅವರಿಗೆ ಹಳೆಯ ನಾಯಕತ್ವ ಇರಕೂಡದು ಎಂದು ಅವರು ಹೇಳಿದ್ದಾರೆ.
ಮುಸ್ಲೀಂ ತುಷ್ಟೀಕರಣವನ್ನು ಕಾಂಗ್ರೆಸ್ ಪಕ್ಶದಿಂದ ಬಿಜೆಪಿ ಕಲಿತುಕೊಂಡಿದೆ. ಇವರ ಉದ್ದೇಶ ಚುನಾವಣೆ ಗೆಲ್ಲುವುದು ಮಾತ್ರ ಎಂದು ಅವರು ಹೇಳಿದ್ದಾರೆ.
ಮುಸ್ಲೀಂ ಮತಕ್ಕಾಗಿ ಅವರನ್ನು ಓಲೈಸುವ ಕ್ರಮದಿಂದ ಅದು ಪಕ್ಷದ ಮೇಲೆ ದುಪ್ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ.