Category ದೇಶ

ನೀವು ರಾಮನ ಪಾತ್ರ ಮಾಡಿದರೂ ಸರಿ, ಪ್ರಧಾನಿ ಮೋದಿ ಪಾತ್ರ ಮಾಡಿದರೂ ಸರಿ, ನಿಮಗೆ ಬಿಜೆಪಿ ಸೀಟು ಗ್ಯಾರಂಟಿ ! ಎರಡೂ ಮಾಡಿದರೆ ಡಬ್ಬಲ್ ಗ್ಯಾರಂಟಿ !!

ಬಿಜೆಪಿಗೂ ಚಿತ್ರ ನಟರಿಗೂ ಅವಿನಾಭಾವ ಸಂಬಂಧ. ಮೊದಲಿನಿಂದಲೂ ಬಿಜೆಪಿ ಚಿತ್ರ ನಟರಿಗೆ ಟಿಕೆಟ್ ನೀಡುತ್ತಲೇ ಬಂದಿದೆ..ಇದಕ್ಕೆ ಕಾರಣ ಏನು ? ನಟರು ರಾಜಕೀಯದಲ್ಲೂ ಚೆನ್ನಾಗಿ ನಟಿಸಬಹುದು ಎಂಬ ನಂಬಿಕೆ ಕಾರಣ ಇರಬಹುದೆ ? ಇದ್ದರೂ ಇರಬಹುದು. ಆದರೆ ಎಲ್ಲ ಚಿತ್ರ ನಟರೂ ರಾಜಕೀಯದಲ್ಲಿ ಚೆನ್ನಾಗಿ ನಟಿಸುತ್ತಾರೆ ಎಂದು ಹೆಳಲು ಸಾಧ್ಯವಿಲ್ಲ. ಕೆಲವು ಸಂದರ್ಭದಲ್ಲಿ ನಟರಿಗಿಂತ ರಾಜಕಾರಣಿಗಳೇ…

ಕರ್ನಾಟಕಕ್ಕೆ ಯಾವುದೇ ಅನುದಾನ ತಡೆಹಿಡಿದಿಲ್ಲ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Niramala Sitharaman : ಜಿಎಸ್ ಟಿ ಪಾಲಿನಲ್ಲಿ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾದ ಬಗ್ಗೆ ಅವರು ಯಾವುದೇ ಪ್ರಸ್ತಾಪ ಮಾಡಿಲ್ಲ. ರಾಜ್ಯದ ಬರಗಾಲ ಪರಿಸ್ಥಿತಿಯ ಬಗ್ಗೆ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ಹೋಗಿದೆ.

ಗಣಿ ಧಣಿಗೆ ಗ್ರೀನ್‌ ಸಿಗ್ನಲ್‌ : ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್..‌..!

ಬಳ್ಳಾರಿ : ಗಂಗಾವತಿ ಶಾಸಕ ಜಿ.‌ಜನಾರ್ಧನರೆಡ್ಡಿ ಅವರು‌ ಕರ್ನಾಟಕ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷ‌ ಸೇರಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ‌ ವಿಲೀನ ಮಾಡಲಿದ್ದಾರೆ. ಈ‌ ಕುರಿತು ಎಲ್ಲಾ‌ ಚರ್ಚೆಗಳಿಗೆ ಸೋಮವಾರ (ಮಾರ್ಚ್‌ ೨೫) ರಂದು ಅಂತಿಮ‌ ತೆರೆ ಬೀಳಲಿದೆ. ಕಲ್ಯಾಣ ಪ್ರಗತಿ ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರ ಸಭೆಯನ್ನು ಬೆಂಗಳೂರಿನ ಮನೆಯಲ್ಲಿ ಭಾನುವಾರ…

ಮಾ. 31ರಂದು ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದಿಂದ ‘ಮಹಾ ರ್‍ಯಾಲಿ’

ನವದೆಹಲಿ: ದೇಶದ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು’ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಮಾರ್ಚ್ 31 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಮಹಾ ರ್‍ಯಾಲಿ’ ನಡೆಸಲಿದೆ. ಇಂಡಿಯಾ ಮೈತ್ರಿಕೂಟದ ನಾಯಕರ ಪತ್ರಿಕಾಗೋಷ್ಠಿಯಲ್ಲಿ ಎಎಪಿಯ ಅತಿಶಿ ಸಿಂಗ್, ಗೋಪಾಲ್ ರೈ, ಸೌರಭ್ ಭಾರದ್ವಾಜ್ ಹಾಗೂ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಮತ್ತು ಇತರರು ಈ…

ಜೈಲಿನಿಂದಲೇ ಕೇಜ್ರಿವಾಲ್ ಆಡಳಿತ; ದೆಹಲಿ ನೀರಿನ ಸಮಸ್ಯೆ ಕುರಿತು ಆದೇಶ

ನವದೆಹಲಿ : ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದಲೇ ಆಡಳಿತ ನಡೆಸಲು ಪ್ರಾರಂಭಿಸಿದ್ದಾರೆ. ಪ್ರಾಯಶಃ ಭಾರತದ ರಾಜಕೀಯ ಇತಿಹಾಸಲ್ಲಿ ಮುಖ್ಯಮಂತ್ರಿಯೊಬ್ಬರು ಜೈಲಿನಿಂದಲೇ ಆಡಳಿತ ನಡೆಸಿದ್ದು ಇದೇ ಮೊದಲು. ರಾಜಧಾನಿ ದೆಹಲಿಯಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಬಗ್ಗೆ ಜೈಲಿನಿಂದಲೇ ಮೊದಲ ಆದೇಶ ಹೊರಡಿಸಿದ್ದಾರೆ. ಜಲಸಂಪನ್ಮೂಲ ಖಾತೆ ನಿರ್ವಹಿಸುತ್ತಿರುವ ಅತಿಶಿ ಅವರಿಗೆ ಈ…

ಲೋಕಸಭೆ, ವಿಧಾನಸಭೆ ಚುನಾವಣೆ: ಒಡಿಶಾದಲ್ಲಿ ಬಿಜೆಪಿ ಒಬ್ಬಂಟಿ

ನವದೆಹಲಿ : ಬಿಜೆಡಿ ಜೊತೆ ಹೊಂದಾಣಿಕೆ ಮಾತುಕತೆ ವಿಫಲವಾಗಿದೆ. ಹೀಗಾಗಿ ಬಿಜೆಪಿಗೆ ಬೇರೆ ದಾರಿ ಇಲ್ಲದಂತಾಗಿದೆ. ಒಡಿಶಾದಲ್ಲಿ ಚುನಾವಣಾ ಪೂರ್ವ ಮೈತ್ರಿಗಾಗಿ ಆಡಳಿತಾರೂಢ ಬಿಜೆಡಿಯೊಂದಿಗೆ ವಾರಗಳ ಕಾಲ ನಡೆದ ಮಾತುಕತೆ ಕೊನೆಗೂ ವಿಫಲವಾಗಿದ್ದು, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಭಾರತೀಯ ಜನತಾ ಪಕ್ಷ ಶುಕ್ರವಾರ ಪ್ರಕಟಿಸಿತು. ಕಳೆದ ಕೆಲವು ದಿನಗಳಿಂದ ಬಿಜು ಜನತಾ…

Arvind Kejriwal; ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ

ನವದೆಹಲಿ: ಅಬಕಾರಿ ನೀತಿ ಪರಿಷ್ಕರಣೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅಬಕಾರಿ ನೀತಿ ಹಗರಣದ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಕೇಜ್ರಿವಾಲ್ ಬಂಧನಕ್ಕೆ ಕೋರಿದ್ದರು. ಆದರೆ ತಮ್ಮನ್ನು ಬಂಧಿಸದಂತೆ ಇಡಿಗೆ ನಿರ್ದೇಶನ ನೀಡುವಂತೆ ಕೋರಿ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅರವಿಂದ್ ಕೇಜ್ರಿವಾಲ್ ಮನವಿ…

ಚುನಾವಣಾ ದೇಣಿಗೆ: ನಮ್ಮದು ಹಪ್ತಾ ವಸೂಲಿಯಾದರೆ ಕಾಂಗ್ರೆಸ್ ಗೆ ಬಂದಿದ್ದು ಏನು ? ಅಮಿತ್ ಷಾ ಪ್ರಶ್ನೆ’

ನವದೆಹಲಿ : ಚುನಾವಣಾ ಬಾಂಡ್ ಗಳನ್ನು ‘ಹಫ್ತಾ ವಸೂಲಿ’ ಎಂದು ಕರೆಯುತ್ತಿರುವ ರಾಹುಲ್ ಗಾಂಧಿ 1,600 ಕೋಟಿ ರೂ.ಗಳನ್ನು ಎಲ್ಲಿಂದ ಪಡೆದರು ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಇದು ಕೇಂದ್ರ ಗೃಹ ಸಚಿವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹಾಕಿದ ಸವಾಲು.ಆದರೆ ಬಿಜೆಪಿಗೆ ಬಂದಿರುವ 12 ಸಾವಿರ ಕೋಟಿಗೂ ಹೆಚ್ಚು ಹಣದ ಬಗ್ಗೆ ಯಾವುದೇ ವಿವರ ನೀಡಿಲ್ಲ.ಜೊತೆಗೆ…

ಸಂಪಾದಕೀಯ : ಕೇಸರಿ ಕುಂಡದಲ್ಲಿ ದಹಿಸಿದ ಸಮಾಜವಾದ; ಈ ಬಾರಿ ಗೆಲ್ಲುತ್ತಾರಾ ಗೀತಾ ಶಿವರಾಜಕುಮಾರ್

ಶಿವಮೊಗ್ಗ..ಒಂದು ಕಾಲದಲ್ಲಿ ಸಮಾಜವಾದದ ನೆಲ.. ಕಾಗೋಡು ಸತ್ಯಾಗ್ರಹದ ಭೂಮಿ..ಶಾಂತವೇರಿ ಗೋಪಾಲ ಗೌಡ, ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ, ಜೆ.ಎಚ್. ಪಟೇಲ್ ಹೀಗೆ ಸಮಾಜವಾದ ಬೆಳೆ ಬಿತ್ತಿದವರು ಹಲವರು.. ರಾಷ್ಟ್ರ ಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ ಮಾನವೀಯ ಮನಸ್ಸುಗಳನ್ನು ಅರಳಿಸಿದವರು. ಇಂತಹ ಶಿವಮೊಗ್ಗ 90 ರ ದಶಕದಲ್ಲಿ ಬದಲಾಗತೊಡಗಿತು. ಸಮಾಜವಾದ ಚಳವಳಿ…