ಬೆಂಗಳೂರು : ರಾಜ್ಯದ ಹಲವೆಡೆ ನಿನ್ನೆ ಭಾನುವಾರ ಮಳೆಯಾಗಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ.
ಮೈಸೂರು ಸುತ್ತಮುತ್ತ ಮಳೆಯಾಗಿದೆ ಎಂದು ಹವಾಮಾನ ಇಲಖೆ ವರದಿ ತಿಳಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ ಎನ್. ಆರ್. ಪುರದಲ್ಲಿ ಮಳೆಯಾಗಿದೆ. ಹಾಸನ ಅರಸೀಕೆರೆಯಲ್ಲೂ ಮಳೆಯಾಗಿದೆ, ಸಕಲೇಶಪುರ ತಾಲೂಕಿನಲ್ಲೂ ಉತ್ತಮ ಮಳೆ ಬಿದ್ದಿದೆ.
ಬೆಳಗಾವಿ ನಗರದಲ್ಲಿ ಉತ್ತಮ ಮಳೆಯಾಗಿದೆ. ಗುಲ್ಬರ್ಗ ಮತ್ತು ಹುಬ್ಬಳ್ಲಿಯಲ್ಲೂ ಮಳೆಯಾಗಿದ್ದು ನೆಲ ತಂಪಾಗಿದೆ.
