Category ರಾಜ್ಯ

ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯನೇ ಅತಿ ಶ್ರೀಮಂತ ದೇವರು- ಈ ವರ್ಷ ಈ ದೇವಾಲಯದ ಆದಾಯ 146 ಕೋಟಿ..!

ಮಂಗಳೂರು : ರಾಜ್ಯದ ದೇವಾಲಯಗಳು ಭಕ್ತಿಯ ಜೊತೆಗೆ ಆದಾಯದ ಕೇಂದ್ರಗಳು. ದೇವರ ದರ್ಶನಕ್ಕೇ ಹೋಗುವವರು ದರ್ಶನ ಆದ ಮೇಲೆ ದೇವರ ಹುಂಡಿಗೆ ದುಡ್ದು ಹಾಕುತ್ತಾರೆ. ಅರ್ಚಕರ ಆರತಿ ತಟ್ಟೆಗೂ ಹಣ ಹಾಕಿ ಭಕ್ತಿ ಪ್ರದರ್ಶಿಸುತ್ತಾರೆ. ಕರ್ನಾಟಕದಲ್ಲಿ ಭಕ್ತರನ್ನು ಆಕರ್ಷಿಸುವ ಹಲವಾರು ದೇವಾಲಯಗಳಿವೆ. ಇವುಗಳಲ್ಲಿ ಬಹಳಷ್ಟು ದೇವಾಲಯಗಳು ಮುಜರಾಯಿ ಇಲಾಖೆಗೆ ಸೇರಿದವು. 2023 ಮತ್ತು 2024ನೇ ಸಾಲಿನ…

ಮತ್ತೆ ಟೋಪಿ ಬದಲಿಸಿದ ಮಾಜಿ ಸಚಿವ ವಿಶ್ವನಾಥ್: ಕುಮಾರಣ್ಣನಿಗೆ ಹಳ್ಳಿಹಕ್ಕಿ ಸಾಥ್

ಬೆಂಗಳೂರು : ಅಡಗೂರು ವಿಶ್ವನಾಥ್ ಮತ್ತೆ ಉಲ್ಟಾ ಹೊಡೆದಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎಚ್, ಡಿ.ಕುಮಾರಸ್ವಾಮಿ ಮತ್ತು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ ವಿಶ್ವನಾಥ್ ಬೆಂಬಲ ಘೋಷಿಸಿದ್ದಾರೆ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಹೆಚ್ ವಿಶ್ವನಾಥ್ ಅವರು ಆ ಪಕ್ಷದಿಂದಲೂ ದೂರವನ್ನು ಕಾಯ್ದುಕೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ…

ಸತ್ಯ ಸುಳ್ಳಿನ ಸಂಘರ್ಷ, ನಮ್ಮದು ಸತ್ಯದ ಪ್ರಚಾರ, ಬಿಜೆಪಿಯದು ಸುಳ್ಳಿನ ಪ್ರಚಾರ : ಸಿದ್ದರಾಮಯ್ಯ

ಕೋಲಾರ: ಇಂದು ಕುರುಡುಮಲೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಸತ್ಯ ಮತ್ತು ಸುಳ್ಳಿನ ನಡುವಿನ ಸಂಘರ್ಷ ಎಂದು ಕರೆದಿದ್ದಾರೆ. ನಮ್ಮ ಪ್ರಚಾರ ಸತ್ಯಡಾ ಪ್ರಚಾರ, ಬಿಜೆಪಿಯದು ಸುಳ್ಳಿನ ಪ್ರಚಾರ ಎಂದು ಅವರು ಟೀಕಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ…

ಕಾದ ಕಾವಲಿಯಾದ ಕರ್ನಾಟಕ, ಮುಂದಿನ ಒಂದುವಾರ ತಾಪಮಾನ ಇನ್ನಷ್ಟು ಹೆಚ್ಚುವ ಸಂಭವ..ಮನೆಯಿಂದ ಹೊರಗೆ ಹೋಗುವಾಗ ಎಚ್ಚರ..ಎಚ್ಚರ,,

ಬೆಂಗಳೂರು : ಕರ್ನಾಟಕ ಬಿಸಿಲಿನ ಬೇಗೆ ಹೊತ್ತಿ ಉರಿಯುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗಿದೆ. ಮುಂದಿನ ಮೂರು ನಾಲ್ಕು ದಿನ ತಾಪಮಾನ ಇನ್ನಷ್ಟು ಹೆಚ್ಚಾಗಬುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮುಂದಿನ ಐದು ದಿನ ಉಷ್ಣ ಅಲೆ ಬೀಸಬಹುದು ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ…

ಪ್ರಧಾನಿ ನರೇಂದ್ರ ಮೋದಿ ರಾಘವೇಂದ್ರ ಅವರ ಅಪ್ಪನ ಮನೆ ಆಸ್ತಿನಾ ಎಂದು ಪ್ರಶ್ನಿಸಿದ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ತಾವು ಕಟ್ಟಿದ ಪಕ್ಷದ ಅವಗಣನೆಗೆ ಒಳಗಾದವರು ಕೆ.ಎಸ್. ಈಶ್ವರಪ್ಪ. ಅವರನ್ನು ಬಿಜೆಪಿಯ ಯಾವ ನಾಯಕರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ಜೊತೆ ಮಾತನಾಡುವುದಕ್ಕೂ ಯಾರೂ ಸಿದ್ದರಿಲ್ಲ. ಈಗ ಅವರು ದುರಂತ ನಾಯಕ. ಈಗ ಅವರು ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಇಳಿಯಲು ಸಿದ್ದರಾಗಿದ್ದಾರೆ. ಇದರ ಉದ್ದೇಶ ಯಡಿಯೂರಪ್ಪ ಮತ್ತು ಅವರ ಮಕ್ಕಳಿಗೆ ಬುದ್ದಿ ಕಲಿಸುವುದು. ಅವರ…

ಕಾಂಗ್ರೆಸ್ ಚುನಾವಣಾ ಪ್ರಚಾರ; ಕುರುಡುಮಲೆ ಗಣೇಶನಿಗೆ ಪ್ರಥಮ ಪೂಜೆ, ಅದ್ದೂರಿ ಮೆರವಣಿಗೆ

ಬೆಂಗಳೂರು : ಭಾರತೀಯರ ನಂಬಿಕೆಯ ಜಗತ್ತಿನಲ್ಲಿ ಗಣೇಶನಿಗೆ ಅಗ್ರಸ್ಥಾನ. ಆತ ಪ್ರಥಮ ಪೂಜಕ. ಯಾವುದೇ ಕೆಲಸ ಮಾಡುವುದಿದ್ದರೂ ಗಜಾನನನಿಗೆ ಮೊದಲ ಪೂಜೆ. ಕಾಂಗ್ರೆಸ್ ಪಕ್ಷ ಕೂಡ ಇದಕ್ಕೆ ಹೊರತಲ್ಲ. ಇಂದು ಕಾಂಗ್ರೆಸ್ ಕೋಲಾರ ಜಿಲ್ಲೆ ಕುರುಡುಮಲೆಯಲ್ಲಿ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಲೋಕಸಭಾ ಚುನಾವಣೆಯ ಪ್ರಚಾರವನ್ನು ಫ್ರ‍ಾರಂಭಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಂತ್ರಿ ಡಿ.ಕೆ. ಶಿವಕುಮಾರ್ ಹಾಗೂ…

ಎರಡು ಸಚಿವ ಸ್ಥಾನಕ್ಕೆ ಟವೆಲ್ ಹಾಕಿದ ದೇವೇಗೌಡರ ಕುಟುಂಬ : ಕುಮಾರಸ್ವಾಮಿಗೆ ಬೇಕಂತೆ ಕೃಷಿ ಸಚಿವ ಸ್ಥಾನ !

ಬೆಂಗಳೂರು : ಇನ್ನೂ ಚುನಾವಣೆ ಮುಗಿದಿಲ್ಲ.. ಯಾರು ಗೆಲ್ಲುತ್ತಾರೆ ಸೋಲುತ್ತಾರೆ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಎಷ್ಟು ಸ್ಠಾನ ಪಡೆಯಬಹುದು ಎಂಬುದು ಗೊತ್ತಿಲ್ಲ. ಆದರೆ ಜೆಡಿಎಸ್ ಈಗಾಗಲೇ ಸಚಿವ ಸ್ಥಾನವನ್ನು ತಾನೇ ಹಂಚಿಕೊಂಡು ಬಿಟ್ಟಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿರು ಡಾ. ಮಂಜುನಾಥ್ ಆರೋಗ್ಯ ಸಚಿವರಾಗುತ್ತಾರೆ ಎಂದು…

ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮೋದಿ ಮತ್ತೊಮ್ಮೆ ವಾತಾವರಣ ನೋಡಿದ ವಿಜಯೇಂದ್ರ !

ಬೆಂಗಳೂರು : ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮೋದಿ ಮತ್ತೊಮ್ಮೆ- ವಿಜಯೇಂದ್ರ ಕಂಡ ವಾತಾವರಣ..ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಪ್ರಕಾರ ಎಲ್ಲ 28 ಕ್ಷೇತ್ರಗಳಲ್ಲೂ ಮೋದಿ ಮತ್ತೊಮ್ಮೆ ಎಂಬ ವಾತಾವರಣ ಇದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಸದೆ ಸುಮಲತಾ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮತ್ತೆ ಬಿಜೆಪಿ ಬರುವ ಆಶಾವಾದವನ್ನು ವ್ಯಕ್ತಪಡಿಸಿದರು. ಈ…

ನಮ್ಮದು ಸೈದ್ಧಾಂತಿಕ ಹೋರಾಟ, ಜನತಂತ್ರ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ ನಡೆಸುತ್ತಿರುವ ಹೋರಾಟ: ರಾಹುಲ್ ಗಾಂಧಿ

ನವದೆಹಲಿ : ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ನಾಶಪಡಿಸಲು ಹೊರಟವರು ಮತ್ತು ಉಳಿಸಲು ಹೊರಟವರ ನಡುವಿನ ಹೋರಾಟ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ಹೋರಾಟ ಮಾಧ್ಯಮಗಳು ಹೇಳುತ್ತಿರುವಂತೆ ಇಲ್ಲ. ಈ ಹೋರಾಟ ಹೆಚ್ಚು ನಿಕಟವಾಗಿದೆ…

ಸುಮಲತಾ ಈಗ ಬಿಜೆಪಿ ಕಾರ್ಯಕರ್ತೆ, ಕೇಸರಿ ಶಾಲಿನ ಪ್ರತಿನಿಧಿ: ಮಂಡ್ಯದ ಜನರ ಸ್ವಾಭಿಮಾನ ಅವರ ಪ್ರೀತಿ ಎಲ್ಲವನ್ನೂ ತ್ಯಜಿಸಿದ ಮೋದಿ ಭಕ್ತೆ

ಬೆಂಗಳೂರು : ಚಿತ್ರ ನಟಿ ಸುಮಲತಾ ತಮ್ಮ ರಾಜಕೀಯ ಬದುಕಿನಲ್ಲಿ ಒಂದು ಸುತ್ತು ಬಂದಿದ್ದಾರೆ. ಅಂಬರೀಷ್ ಅವರ ನಿಧನದ ನಂತರ ಮಂಡ್ಯವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಅವರು ಪ್ರೀತಿಯ ಸೋಸೆಯಾದರು. ಮಂಡ್ಯದ ಮಗಳಾದರು. ಮಂಡ್ಯದ ಜನರ ಸ್ವಾಭಿಮಾನದ ಸಂಕೇತವಾದರು. ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದರು. ನಿಖಿಲ್ ಕುಮಾರಸ್ವಾಮಿ ಅವರಂತಹ ಪ್ರಬಲ ಅಭ್ಯರ್ಥಿಯನ್ನು…