ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆಯ ಮೇಲೆ ಹೇಳಿಕೆ ನೀಡುತ್ತಿದ್ದಾರೆ. ಚುನಾವಣಾ ಪ್ರಚಾರ ಸಭೆಗಳಲ್ಲಿಅವರು ಆಡುತ್ತಿರುವ ಮಾತುಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎಂಬುದು ಗೊತ್ತಾಗುವುದಿಲ್ಲ. ಆದರೆ ಈಗ ಎಲ್ಲರ ಸುಳ್ಳುಗಳನ್ನು ಬಯಲುಗೊಳಿಸುವಷ್ಟು ಭಾರತೀಯರು ಪ್ರಬುದ್ದರಾಗಿದ್ದಾರೆ,
ಪ್ರಧಾನಿ ನರೇಂದ್ರ ಮೋದಿಯವರು ಈಗ ಎರಡು ದಿನಗಳ ಹಿಂದೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತ ಮುಸ್ಮಿಮರ ಮೇಲೆ ದಾಳಿ ನಡೆಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತದ ಒಳಗೆ ನುಸುಳಿ ಬಂದವರಿಗೆ, ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ದೇಶದ ಸಂಪತ್ತನ್ನು ಹಂಚುತ್ತದೆ ಎಂದು ಆರೋಪಿಸಿದ್ದರು.
ಈ ಮಾತಿಗೆ ಕಟು ಟೀಕೆ ವ್ಯಕ್ತವಾಗಿತ್ತು. ಭಾರತವನ್ನು ಪ್ರೀತಿಸುವವರು ಇಲ್ಲಿನ ಜನತಂತ್ರವನ್ನು ಗೌರವಿಸುವವರು, ದೇಶ ಸಂವಿಧಾನವನ್ನು ಉಳಿಸಲು ಬಯಸುವವರು ಪ್ರಧಾನಿ ಹೇಳಿಕೆಯನ್ನು ಟೀಕಿಸಿದ್ದರು.
ಈಗ ಸುಮಾರು 16 ಸಾವಿರಕ್ಕೂ ಹೆಚ್ಚು ಭಾರತೀಯರು ಈ ಹೇಳಿಕೆಯನ್ನುಖಂಡಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿದ್ದಾರೆ. ಜೊತೆಗೆ ತಮ್ಮ ಈ ಒತ್ತಾಯಕ್ಕೆ ಪುರಸ್ಕಾರ ದೊರಕುತ್ತದೆಯೇ ಇಲ್ಲವೇ ಎಂಬುದು ಅವರಿಗೆ ಗೊತ್ತಿದೆ.