ಕೊಲ್ಕತ್ತಾ : ನಿನ್ನೆ ರಾಮ ನವಮಿ ಸಂದರ್ಭದಲ್ಲಿ ನಡೆದ ಮೆರವಣಿಗೆ. ಇದು ಘರ್ಷಣೆಗೆ ಕಾರಣವಾಯಿತು.
ಬಂಗಾಲದ ಮುರ್ಷಿದಾಬಾದ್ ಗಲಾಟೆಯ ಕೇಂದ್ರ. ಮೆರವಣಿಗೆ ಬರುತ್ತಿದ್ದಂತೆ ಕೆಲವರು ಮೆರವಣಿಗೆಯ ಮೇಲೆ ಕಲ್ಲು ಹೊಡೆದರು.
ಪರಿಸ್ಥಿತಿ ಕೈಮೀರುವ ಹಂತಕ್ಕೆ ಬಂದಾಗ ಪೊಳಿಸರು ಮೊದಲು ಲಾಠಿ ಚಾರ್ಜ್ ಮಾಡಿದರು. ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲು ಅಶ್ರವಾಯು ಸಿಡಿಸಲಾಯಿತು.
ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಕೆಲವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಂಗಾಲದ ಬಿಜೆಪಿ ಘಟಕ ಮೆರವಣಿಗೆಯ ಮೇಲೆ, ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಲಾಯಿತು. ರಾಮ ನವಮಿ ಮೆರವಣಿಗೆಗೆ ಅಗತ್ಯ ಇರುವ ಎಲ್ಲ ಪರವಾನಿಗೆಗಳನ್ನು ಪಡೆಯಲಾಗಿತ್ತು ಎಂದು ತಿಳಿಸಿದೆ.
