ಬೆಂಗಳೂರು : ಮುಸ್ಲೀಮ್ ವಿರೋಧವನ್ನೆ ಅಸ್ತ್ರವನ್ನಾಗಿ ಬಳಸುವುದು ಬಿಜೆಪಿ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಚುನಾವಣೆ ಬಂದಾಗಲಂತೂ ಮುಸ್ಲೀಂ ರು ಬೇಕೇ ಬೇಕು. ಅದಿಲ್ಲದಿದ್ದರೆ ಅವರ ಚುನಾವಣಾ ಪ್ರಚಾರವೇ ಇಲ್ಲ.
ಪ್ರಧಾನಿ ಮೋದಿ ಕಾಂಗ್ರೆಸ್ ಮೇಲೆ ದಾಳಿ ಮಾಡಲು ಮುಸ್ಲೀಂ ಜನಾಂಗದ ಮೇಲೆ ಧ್ವೇಷವನ್ನು ಪ್ರದರ್ಶಿಸುತ್ತಿದ್ದಾರೆ. ಮುಸ್ಲಿಂ ದ್ವೇಷವನ್ನು ಹೊರ ಹಾಕಲು ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಾರೆ.
ಭಾರತದ ಸಂಪತ್ತನ್ನು ಕಾಂಗ್ರೆಸ್ ಮುಸ್ಲೀಂರಿಗೆ ಹಂಚುತ್ತದೆ ಎಂದು ಆರೋಪ ಮಾಡಿದ್ದ ಪ್ರಧಾನಿ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಂರಿಗೆ ಕೊಡುತ್ತಿದೆ ಎಂದು ದೂರಿದ್ದರು.
ಪಾಪ ಮೋದಿಯವರಿಗೆ ಮುಸ್ಲೀಂ ಮೀಸಲಾತಿ ಕರ್ನಾಟಕದಲ್ಲಿ ಹೇಗೆ ಜಾರಿಗೆ ಬಂತು ಎಂಬುದೇ ಗೊತ್ತಿದ್ದಂತೆ ಇಲ್ಲ.
ಮುಸ್ಲೀಂ ಮೀಸಲಾತಿ ಕರ್ನಾಟಕದಲ್ಲಿ ಜಾರಿಗೆ ಬಂದಿದ್ದು 1995 ರಲ್ಲಿ . ಜಾರಿಗೆ ತಂದಿದ್ದು ದೇವೇಗೌಡರ ಜಾತ್ಯಾತೀತ ಜನತಾ ದಳ.
ಇದು ಪ್ರಧಾನಿಗಳಿಗೆ ಗೊತ್ತಿಲ್ಲವೆ ? ಕಾಂಗ್ರೆಸ್ ಕೊಟ್ಟ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ ಮೋದಿ ಅವರಿಗೆ ದೇವೇಗೌಡರು ಈ ವಿಷಯ ತಿಳಿಸಿಲ್ಲವೆ ? ಇದೇ ಸಂದರ್ಭದಲ್ಲೇ ಮುಂದಿನ ಜನ್ಮದಲ್ಲಿ ತಾವು ಮುಸ್ಲೀಂ ಕುಟುಂಬದಲ್ಲಿ ಜನಿಸುವುದಾಗಿ ಹೇಳಿದವರು ದೇವೇಗೌಡರೇ ಅಲ್ಲವೆ?.