ಲಾಹೋರ್ : ಭಾರತೀಯ ಸರಬ್ಜಿತ್ ಸಿಂಗ್ 2011 ರಲ್ಲಿ ಲಾಹೋರ್ ಜೈಲಿನಲ್ಲಿ ಕೊಲೆಯಾಗಿದ್ದರು. ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದ ಮೇಲೆ 1990 ರಲ್ಲೆ ಪಾಕಿಸ್ತಾನ ಸರಬ್ಜಿತ್ ಸಿಂಗ್ ಅವರನ್ನು ಬಂಧಿಸಿತ್ತು.

ಈ ಸರಬ್ಜಿತ್ ಸಿಂಗ್ ಅವರನ್ನು ಜೈಲಿನಲ್ಲೇ ಕೊಲೆ ಮಾಡಿದ ಭೂಗತ ಲೋಕದ ದೊರೆ ಅಮಿರ್ ಸರ್ಪರಾಜ್ ನನ್ನು ಅನಾಮಿಕ ವ್ಯಕ್ತಿಗಳು ಗುಂಡು ಹೊಡೆದು ಸಾಯಿಸಿದ್ದಾರೆ.

ಸರಬ್ಜಿತ್ ಸಿಂಗ್ ಗೂಢಚಾರಿಕೆ ಆರೋಪದ ಮೇಲೆ ಲಾಹೋರ್ ಜೈಲಿನಲ್ಲಿದ್ದರು. ಆಗ ಜೈಲಿನ ಒಳಗೆ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಹೀಗೆ ಹಲ್ಲೆ ಮಾಡಿದವರಲ್ಲಿ ಪ್ರಮುಖ ವ್ಯಕ್ತಿ ಅಮಿರ್ ಸರ್ಫರಾಜ್.

ಈತ ಅಂಡರ್ ವರ್ಲ್ಡ್ ಡಾನ್ ಈತನನ್ನು ಇವತ್ತು ಬೆಳಿಗ್ಗೆ ಲಾಹೋರ್ ನ ಇಸ್ಲಾಂಪುರ ಪ್ರದೇಶದಲ್ಲಿ ಇಬ್ಬರು ಮೋಟಾರ್ ಸೈಕಲ್ಲಿನಲ್ಲಿ ಬಂದು ಗುಂಡಿನ ದಾಳಿ ನಡೆಸಿದರು. ನಂತರ ಈತನನ್ನು ಆಸ್ಪತ್ರೆಗೆ ಕರೆದೊಯ್ದರೂ ಅಮಿರ್ ಬದುಕಿ ಉಳಿಯಲಿಲ್ಲ.

Leave a Reply

Your email address will not be published. Required fields are marked *