ಕಮಲದ ಸ್ನೇಹ ಮಾಡಿರುವ ತೆನೆ ಹೊತ್ತ ಮಹಿಳೆ ಈಗ ಅತಂತ್ರ : ಮೋದಿ ಶಾ ಹೊಡೆತದಿಂದ ಕಂಗೆಟ್ಟ ಜೆಡಿಎಸ್

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಕೇವಲ ಎರಡು ಸ್ಥಾನಕ್ಕಾಗಿ ಇಷ್ಟೆಲ್ಲ ಹೊರಾಟ ಮಾಡಬೇಕಿತ್ತೆ ಎಂದು ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲ ಎಂಬುದು ಅವರ ಆರೋಪ. ಜೆಡಿಎಸ್ ವರಿಷ್ಟ ಎಚ್. ಡಿ. ದೇವೇಗೌಡರು ನಿನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ…

ಇನ್ನು ಮೇಲೆ ಸರ್ಕಾರಿ ಕಚೇರಿಗಳು 5 ದಿನ ಮಾತ್ರ ತೆರೆದಿರುತ್ತವೆ!

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಯ ಜೊತೆಗೆ ಮತ್ತೊಂದು ಶುಭ ಸುದ್ದಿ. 7ನೇ ವೇತನ ಆಯೋಗವು ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ, ಎರಡು ದಿನ ರಜೆ ಇರುವ ಪದ್ಧತಿ ಜಾರಿಗೆ ಅಸ್ತು ಎಂದಿದೆ. ಇದು ನೌಕರರ ಬಹುದಿನದ ಬೇಡಿಕೆಯಾಗಿತ್ತು. ರಾಜ್ಯ ಸರ್ಕಾರಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ವಾರದಲ್ಲಿ 5 ದಿನ…

ಕೇಸರಿ ಮಿತ್ರರ ಬಗ್ಗೆ ಜೆಡಿಎಸ್ ಮುನಿಸು- ಕೋಲಾರದ ಕಗ್ಗಂಟು

ಜೆಡಿಎಸ್ ಎಂಬ ಮಾಜಿ ಜಾತ್ಯಾತೀತ ಪಕ್ಷ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆಯ ಸಮಸ್ಯೆ ಉಂಟಾಗಿದೆ. ಎಲ್ಲ ಸರಿಯಾಗಿ ಆಯಿತು ಎಂದುಕೊಳ್ಳುವಾಗಲೇ ಕೋಲಾರ ಕಗ್ಗಂಟು ಸಮಸ್ಯೆಯನ್ನು ಸೃಷ್ಟಿಸಿದೆ.. ಇತ್ತೀಚಿನ ವರದಿಯ ಪ್ರಕಾರ ಕೋಲಾರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ಸಿದ್ಧವಿಲ್ಲ. ಜೆಡಿಎಸ್ ಗೆ ಕೋಲಾರ ಬೇಕೇ ಬೇಕು…ಕೋಲಾರದಲ್ಲಿ ಈಗ ಬಿಜೆಪಿ ಸಂಸತ್ ಸದಸ್ಯರಿದ್ದಾರೆ. ಜೊತೆಗೆ ಬಿಜೆಪಿಯ…

ಹೂಡಿದ್ದು 6 ಲಕ್ಶ ಬಂಡವಾಳ; ಚುನಾವಣೆ ದೇಣಿಗೆ ನೀಡಿದ್ದು 900 ಕೋಟಿ ರೂಪಾಯಿಗೂ ಹೆಚ್ಚು ?ಇದು ಎಲೆಕ್ಟ್ರಲ್ ಬಾಂಡ್ ಪವಾಡ…!

ಮೆಘಾ ಇಂಜನಿಯರಿಂಗ್.. ಈ ಕಂಪೆನಿ ಈಗ ದೇಶದಲ್ಲಿ ಭಾರಿ ಪ್ರಚಾರದಲ್ಲಿದೆ.. ಇದಕ್ಕೆ ಕಾರಣ ಎಲೆಕ್ಟ್ರಲ್ ಬಾಂಡ್ !ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದವರ ಪಟ್ಟಿಯಲ್ಲಿ ಈ ಕಂಪೆನಿಗೆ ಎರಡನೆಯ ಸ್ಥಾನ.ಆಂದ್ರ ಮೂಲದ ಕಂಪೆನಿ ಇದು. ಎಂ ಈ ಐಎಲ್ ಎಂಬುದು ಈ ಕಂಪೆನಿಯ ಶಾರ್ಟ್ ಫಾರ್ಮ್ ಹೆಸರು.1989ರಲ್ಲಿ ಆಂದ್ರದ ಪಮ್ಮಿ ರೆಡ್ಡಿ ಮತ್ತು ಪಿಚ್ಚಿ…

ಎಲೆಕ್ಟ್ರಲ್ ಬಾಂಡ್; ಪ್ರಧಾನ ಮಂತ್ರಿ ಹಫ್ತಾ ಯೋಜನೆ, ಕಾಂಗ್ರೆಸ್ ಆರೋಪ

ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ, ಮೋದಿ ಅವರದ್ದು ಹಫ್ಸಾ ವಸೂಲಿ ಸರ್ಕಾರ ಎಂದೂ ಕಾಂಗ್ರೆಸ್ ಆರೋಪಿಸಿದೆ. ಸಿಬಿಐ, ಇಡಿ ಅಥವಾ ಐಟಿಯಿಂದ ತನಿಖೆ ಎದುರಿಸಿದ ಒಟ್ಟು 21 ಸಂಸ್ಥೆಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ನ ಜೈರಾಮ್ ರಮೇಶ್ ಆರೋಪಿಸಿದ್ದಾರೆ.. ಪ್ರತಿ ದಿನ ಕಳೆದಂತೆ…

ಎಸ್ ಬಿ ಐ ಗೆ ಸುಪ್ರೀಂ ಕೋರ್ಟ್ ಮತ್ತೆ ತಪರಾಕಿ. ಚುನಾವಣಾ ದೇಣಿಗೆ ವಿವರಗಳನ್ನು ಮುಚ್ಚಿಡಬೇಡಿ..

ಚುನಾವಣಾ ದೇಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಮತ್ತೊಮ್ಮೆ ತಪರಾಕಿ ನೀಡಿದೆ. ದೇಣಿಗೆ ವಿವರಗಳನ್ನು ನೀಡುವಾಗ ಸೆಲೆಕ್ಟೀವ್ ಆಗಬೇಡಿ ಎಂದೂ ಎಸ್ ಬಿ ಐಗೆ ನ್ಯಾಯಾಲಯ ಹೇಳಿದೆ. ಇದಿಷ್ಟೇ ಸಾಲದು, ಎಲ್ಲ ಮಾಹಿತಿ ಬೇಕು.. ವಿವರ ಬಹಿರಂಗದಲ್ಲೂ ಸೆಲೆಕ್ಟೀವ್ ಆಗದಿರಿ ಎಂದೂ ನ್ಯಾಯಾಲಯ ಹೇಳಿದೆ. ಇದರಿಂದಾಗಿ ಕೆಲವು ವಿವರಗಳನ್ನು ಮುಚ್ಚಿಡಲು…

ನಾಳೆ ಸದಾನಂದ ಗೌಡರ ಮಹತ್ವದ ಪತ್ರಿಕಾಗೋಷ್ಟಿ; ಬಿಜೆಪಿಗೆ ಗುಡ್ ಬೈ ಹೇಳುವರೇ ಮಾಜಿ ಮುಖ್ಯಮಂತ್ರಿ ?

ಮೋದಿ ಮತ್ತು ಅಮಿತ್ ಷಾ ಅವರ ಬಿಜೆಪಿ, ಅಡ್ವಾಣಿ, ವಾಜಪೇಯಿ ಅವರ ಬಿಜೆಪಿ ಅಲ್ಲ. ತತ್ವ ಸಿದ್ದಾಂತಕ್ಕಿಂತ ಮುಖ್ಯವಾಗಿ ಚುನಾವಣೆ ಗೆಲ್ಲುವುದೊಂದೇ ಗುರಿ. ಈ ಗುರಿಗಾಗಿ ಯಾವುದೇ ದಾರಿಯನ್ನು ಬೇಕಾದರೂ ಈಗಿನ ಬಿಜೆಪಿ ಹಿಡಿಯಬಲ್ಲದು. ಇದಕ್ಕೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳೇ ಸಾಕ್ಷಿ. ದೇಶದಲ್ಲಿ ಕರ್ನಾಟದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರು ಒಬ್ಬೊಬ್ಬರಾಗಿ ಮೂಲೆಗುಂಪಾಗುತ್ತಿದ್ದಾರೆ. ಹಳೆಯ ನಾಯಕರನ್ನು…

ದೇವೇಗೌಡರ ಜೆಡಿಎಸ್ ಗೂ ಹೈದರಾಬಾದ್ ಕಂಪೆನಿಯಿಂದ ಹರಿದು ಬಂದಿದೆ ಕೋಟಿ ಕೋಟಿ ದೇಣಿಗೆ..!

ಚುನಾವಣಾ ದೇಣಿಗೆಯ ನಿಗೂಢ ಸತ್ಯ ಈಗ ಬಹಿರಂಗವಾಗುತ್ತಿದೆ. ರಾಜಕೀಯ ಪಕ್ಷಗಳು ನಡೆಯುತ್ತಿರುವುದೇ ಉದ್ಯಮಪತಿಗಳ ಹಣದಿಂದ ಎಂಬುದು ಇಂದಿನ ಸ್ಥಿತಿ..ಎಲೆಕ್ಟ್ರಲ್ ಬಾಂಡ್ ಗೆ ಸಂಬಂಧಿಸಿದತೆ ಸರ್ವೋಚ್ಛ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ ಮೇಲೆ ರಾಜಕೀಯ ಪಕ್ಷಗಳ ಮುಖವಾಡವೂ ಕಳಚಿ ಬೀಳುತ್ತಿದೆ.ಈಗಿನ ಮಾಹಿತಿಯ ಪ್ರಕಾರ ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರವಲ್ಲ ಪ್ರಾದೇಶಿಕ ಪಕ್ಷಗಳೂ ಫಲಾನುಭವಿಗಳೇ.. ಈ ಪಕ್ಷಗಳ…

ಬಿಜೆಪಿ ವರಿಷ್ಠರ ಸಂಧಾನ ವಿಫಲ: ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳದ ಈಶ್ವರಪ್ಪ ಟೆಂಪಲ್ ರನ್ ಗೆ ಪ್ರಯಾಣ

ಕೆ. ಎಸ್. ಈಶ್ವರಪ್ಪ ಕೋಪವನ್ನು ಶಮನಗೊಳಿಸುವ ಯತ್ನ ವಿಫಲವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡುವ ದಿನವೇ ಅವರು ಮಠಾಧಿಪತಿಗಳ ಭೇಟಿ ಮತ್ತು ದೇವಾಲಯಗಳ ದರ್ಶನಕ್ಕೆ ಹೊರಟು ನಿಂತಿದ್ದಾರೆ. ಪುತ್ರ ಕೆ.ಇ.ಕಾಂತೇಶ್’ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದಕ್ಕೆ ಅವರು ಅಸಮಾಧಾನಗೊಂಡಿದ್ದಾರೆ. ಬಂಡಾಯದ ಬಾವುಟ ಹಾರಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ…