ಬೆಂಗಳೂರು : ಬಿಸಿಲ ಬೇಗೆಯಿಂದ ನೊಂದ ರಾಜ್ಯದ ಜನರಿಗೆ ಈಗ ತಂಫು.ರಾಜ್ಯದ ಹಲವೆಡೆ ಮಳೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಶನಿವಾರ ಬೆಳಗಿನಿಂದ ಮಳೆ ಸುರಿಯುತ್ತಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡದಲ್ಲಿ ಮಳೆ ಬಿದ್ದಿದೆ. ಉಳಿದಂತೆ ಚಿಕ್ಕಮಗಳೂರು, ಶಿವಮೊಗ್ಗ, ಯಾದಗಿರಿ, ವಿಜಯನಗರ, ಗದಗ, ಬೆಳಗಾವಿ ಧಾರವಾಡ ಜಿಲ್ಲೆಗಳಲ್ಲಿ ಬೆಳಗಿನಿಂದ ಮಳೆಯಾಗುತ್ತಿದೆ..
ಹಲವೆಡೆ ಜನ ಸಂತಸದಿಂದ ಮಳೆಯಲ್ಲಿ ನೆನೆದು ಖುಷಿ ಪಡುತ್ತಿದ್ದಾರೆ. ಫೂರ್ವ ಮುಂಗಾರಿನ ಈ ಮಳೆ ಬಿಸಿಲಿನ ತಾಪವನ್ನು ಕಡಿಮೆ ಮಾಡಿದೆ.






