ಬೆಂಗಳೂರು : ಮುಖ್ಯಮಂತ್ರಿ ಕುರ್ಚಿಗೇರಲು ಡಿಸಿಎಂ ಕನಸು, ಕುರ್ಚಿ ಉಳಿಸಿಕೊಳ್ಳಲು ಸಿಎಂ ಸರ್ಕಸ್ಸು ಮಾಡುತ್ತಿದ್ದಾರೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್ ಆಶೋಕ್, ಕುಸಿದ ಕಾನೂನು ಸುವ್ಯವಸ್ಥೆ, ಮಹಿಳೆಯರು ಹೆಣ್ಣುಮಕ್ಕಳಿಗಿಲ್ಲ ಸುರಕ್ಷತೆ, ಏರುತ್ತಲೇ ಇದೆ ಸಾಲದ ಹೊರೆ, ಅಭಿವೃದ್ದಿ ಮಾತ್ರ ಕಣ್ಮರೆ. ನಾಲಾಯಕ್ ಸಚಿವರುಗಳು. ಸಾಲು ಸಾಲು ಎಡವಟ್ಟುಗಳು.
ಸಿಎಂ ಕುರ್ಚಿಗೇರಲು ಡಿಸಿಎಂ ಕನಸು. ಕುರ್ಚಿ ಉಳಿಸಿಕೊಳ್ಳಲು ಸಿಎಂ ಸರ್ಕಸ್ಸು. ಜಾತಿಗೊಂದು, ಜಿಲ್ಲೆಗೊಂದು ಬಣ. ನಾಡಿನ ಅಭಿವೃದ್ದಿ ಮಾತ್ರ ಗೌಣ, ಇದು ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಕಥೆ. ಳೂವರೆ ಕೋಟಿ ಕನ್ನಡಿಗರ ದಿನನಿತ್ಯದ ವ್ಯಥೆ ಎಂದು ಕಿಡಿಕಾರಿದ್ದಾರೆ.







