ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಕಂದಗನೂರು’ನಲ್ಲಿ ಚಿರತೆ ಪತ್ತೆ ದೃಢ; ಕತ್ತೆ ಕಿರುಬ ಎಂದಿದ್ದ ಅರಣ್ಯ ಅಧಿಕಾರಿಗಳು.!
ವರದಿ; ಶ್ರೀಶೈಲ್ ಪೂಜಾರಿ
ಮುದ್ದೇಬಿಹಾಳ; ತಾಲೂಕಿನ ಕಂದಗನೂರು ಗ್ರಾಮದಲ್ಲಿ ಚಿರತೆ ಇರುವುದು ದೃಢವಾಗಿದೆ. ನಿನ್ನೆ(ಮಂಗಳವಾರ) ಅಳವಡಿಸಿದ್ದ ಸೆನ್ಸಾರ್ ಕ್ಯಾಮರಾದಲ್ಲಿ ಚಿರತೆ ಬಂದು ಹೋಗಿರುವುದು ಹಾಗೂ ಅದರ ಹೆಜ್ಜೆ ಗುರುತುಗಳು ಪತ್ತೆಯಾಗಿವೆ ಎಂದು ವಲಯ ಅರಣ್ಯ ಅಧಿಕಾರಿಗಳೊಬ್ಬರು ಸ್ಪಷ್ಟಪಡಿಸಿದರು.

ಮೂರು ದಿನ ಹಿಂದೆ ಚಿರತೆ ಚಲನವಲನಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿದುಬಂದಿದ್ದು, ಅರಣ್ಯ ಇಲಾಖೆ ನಿನ್ನೆಯಿಂದ ಚಿರತೆಯ ಸೆರೆಗೆ ಬೋನು ಇರಿಸಿದ್ದರು. ಮಂಗಳವಾರ ರಾತ್ರಿ (ಜುಲೈ 30) ಚಿರತೆ ಬಂದು ಹೋಗಿರುವುದು ಹಾಗೂ ಅದರ ಹೆಜ್ಜೆಗುರುತುಗಳು ಪತ್ತೆಯಾಗಿದೆ. ಚಿರತೆ ಹಿಡಿಯಲು ಬೋನಿನಲ್ಲಿ ಮಾಂಸ ಅಳವಡಿಸಲಾಗಿತ್ತು ಆದರೆ ಮೊದಲು ಬೋನಿನಲ್ಲಿ ನಾಯಿ ಬಿದ್ದಿದ್ದು, ತದನಂತರ ಬೋನಿನ ಸಮೀಪ ಚಿರತೆ ಬಂದು ಹೋಗಿದೆ ಎಂದು ವಲಯ ಅರಣ್ಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಇತ್ತೀಚೆಗೆ ಕಂದಗನೂರನಲ್ಲಿ ಜುಲೈ 28 ಕ್ಕೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಅಲ್ಲದೇ ಗ್ರಾಮದ ಸಿದ್ರಾಮಪ್ಪ ಬೋವಿ ಅವರ ಹೊಲದಲ್ಲಿ ಆಕಳು, ಎಮ್ಮೆಯನ್ನು ತಿಂದು ಕಡಿದು ಹಾಕಿತ್ತು. ಇದರಿಂದ ಗ್ರಾಮದ ರೈತರು ಭಯಭೀತರಾಗಿ ಕೃಷಿಗೆ ಹೋಗುವುದನ್ನ ನಿಲ್ಲಿಸಿದ್ದರು. ಈಗ ಚಿರತೆ ಇರುವುದು ದೃಢವಾದ ಹಿನ್ನಲೆಯಲ್ಲಿ ಮತ್ತೆ ಜಮೀನಿಗೆ ನೀರು ಹಾಯಿಸಲು ಹಾಗೂ ಇನ್ನೀತರ ಕೆಲಸ ಕಾರ್ಯಗಳಿಗೆ ಹೋಗಲು ರೈತರು ಹಿಂದೇಟು ಹಾಕುವಂತಾಗಿದೆ. ಆಗ ಅರಣ್ಯ ಅಧಿಕಾರಿಗಳು ಚಿರತೆ ಅಲ್ಲ ಕತ್ತೆ ಕಿರುಬ ಎಂದು ಹೇಳಿ ನುಣುಚಿಕೊಳ್ಳುವ ಯತ್ನ ಮಾಡಿದ್ದರು.

ಚಿರತೆ ಸೆರೆಗೆ ಪರಿಣಿತ ತಂಡ ರಚನೆ ಯಾವಾಗ?
ಇಷ್ಟೆಲ್ಲಾ ಘಟನೆ ಸಂಭವಿಸಿದರು ಈ ವರೆಗೂ ವಲಯ ಅರಣ್ಯಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಚಿರತೆ ಕಾಣಿಸಿಕೊಂಡಿರುವುದನ್ನು ಗ್ರಾಮಸ್ಥರು ಮೂರು ದಿನದಿಂದ ಹೇಳುತ್ತಿದ್ದರು ಅಧಿಕಾರಿಗಳು ಕಾಲಹರಣ ಮಾಡಿದ್ದು ನಿನ್ನೆಯಿಂದ ಬೋನು ಅಳವಡಿಸಲಾಗಿದೆ.

ಈವರೆಗೂ ಚಿರತೆ ಹಿಡಿಯಲು ಪರಿಣಿತ ತಂಡ ರಚನೆ ಆಗಿಲ್ಲ. ಇಲ್ಲಿನ ಸಿಬ್ಬಂದಿಗಳಿಗೆ ಶಿಪ್ಟ್ ರೀತಿಯಲ್ಲಿ ಐದು ಜನರ ತಂಡ ಕಾರ್ಯಾಚರಣೆಯನ್ನು ಮಾಡುತ್ತಿದ್ದಾರೆ. ಆದರೆ ಗ್ರಾಮದ ಸುತ್ತಮುತ್ತಲೂ ಕಬ್ಬು ಇರುವುದರಿಂದ ಕಾರ್ಯಾಚರಣೆಗೆ ಅಡಚಣೆ ಆಗಿದ್ದು, ಪರಣಿತ ತಂಡ ರಚನೆ ಆಗುವವರೆಗೂ ಈ ಚಿರತೆ ಸೆರೆ ಹಿಡಿಯುವುದು ಯಶಸ್ವಿ ಆಗುತ್ತಾ ಎನ್ನುವಂತಾಗಿದೆ.

