Sheela Bhat

Sheela Bhat

ಶೀಲಾ ಭಟ್ ಅವರಿಗೆ ಪತ್ರಿಕೋದ್ಯಮದಲ್ಲಿ ೨೨ ವರ್ಷಗಳ ಅನುಭವವಿದೆ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ ಹಾಗೂ ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕಿ, ವರದಿಗಾರ್ತಿ , ಕಾರ್ಯಕ್ರಮ ನಿರ್ದೇಶನ ಮತ್ತು ಕಾರ್ಯಕ್ರಮ ನಿರ್ವಹಣೆಯ ಕೆಲಸ ಮಾಡಿದ್ದಾರೆ. ಸಮಾಜ, ರಾಜಕೀಯ, ವೈದ್ಯಕೀಯ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಆಳವಾದ ಆಸಕ್ತಿ ಹೊಂದಿರುವ ಅವರು, ನಿರಂತರ ಕಲಿಕೆಯನ್ನು ಬದುಕಿನ ಭಾಗವಾಗಿ ನೋಡುತ್ತಾರೆ.

ಗುರು ಗೋವಿಂದ್ ಸಿಂಗ್ ಮತ್ತು ಭಾರತದಲ್ಲಿ ಸಿಖ್ ಧರ್ಮದ ಇತಿಹಾಸ

ತ್ಯಾಗ, ಧರ್ಮರಕ್ಷಣೆ ಮತ್ತು ಸಮಾನತೆಯ ಶಾಶ್ವತ ಪರಂಪರೆ ಭಾರತದ ಧಾರ್ಮಿಕ–ಸಾಂಸ್ಕೃತಿಕ ಇತಿಹಾಸದಲ್ಲಿ ಸಿಖ್ ಧರ್ಮವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ಭಕ್ತಿ, ಧರ್ಮರಕ್ಷಣೆ, ಸಾಮಾಜಿಕ ಸಮಾನತೆ ಮತ್ತು ಮಾನವ ಗೌರವವನ್ನು ಮೂಲ ತತ್ತ್ವಗಳಾಗಿ ಹೊಂದಿರುವ ಈ ಧರ್ಮದ ಬೆಳವಣಿಗೆಯಲ್ಲಿ ಗುರು ಗೋವಿಂದ್ ಸಿಂಗ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ಕೇವಲ ಧಾರ್ಮಿಕ ಗುರು ಮಾತ್ರವಲ್ಲದೆ, ನ್ಯಾಯ,…

ಧರ್ಮಸಿಂಗ್: ಮೌನ ಮತ್ತು ರಾಜಕೀಯ ಸಂಬಂಧದ ಪ್ರಾಮುಖ್ಯತೆ ತಿಳಿಸಿಕೊಟ್ಟ ಅಲ್ಪಸಂಖ್ಯಾತ ರಾಜಕಾರಣಿ

ಕರ್ನಾಟಕ ರಾಜಕಾರಣದಲ್ಲಿ ಕೆಲವು ನಾಯಕರು ಅಧಿಕಾರದ ಗಟ್ಟಿತನದಿಂದ ಗುರುತಿಸಲ್ಪಡುತ್ತಾರೆ; ಇನ್ನೂ ಕೆಲವರುಸಜ್ಜನಿಕೆಯ ನಿಶ್ಶಬ್ದ ಪ್ರಭಾವದಿಂದ ನೆನಪಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಎರಡನೇ ವರ್ಗಕ್ಕೆ ಸೇರಿದ ಅಪರೂಪದ ರಾಜಕಾರಣಿ. ಅವರು ಕರ್ನಾಟಕದ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ (2004–2006) ಸೇವೆ ಸಲ್ಲಿಸಿದ ಅವಧಿ, ಆಡಳಿತಾತ್ಮಕ ಸವಾಲುಗಳಷ್ಟೇ ಅಲ್ಲ, ವ್ಯಕ್ತಿತ್ವದ ಬಗ್ಗೆ ನಡೆಯುವ ಚರ್ಚೆಗಳಿಗೂ ಕಾರಣವಾಗಿದೆ. ಸಂಯುಕ್ತ ಸರ್ಕಾರದ…

ಅಟಲ್ ಬಿಹಾರಿ ವಾಜಪೇಯಿ: ರಾಜಕೀಯ ಅಧಿಕಾರವನ್ನು ಮೌಲ್ಯಗಳೊಂದಿಗೆ ಸಂಯೋಜಿಸಿದ ಅಪರೂಪದ ಪ್ರಧಾನಮಂತ್ರಿ

(25 ಡಿಸೆಂಬರ್ 1924 – 16 ಆಗಸ್ಟ್ 2018) ಅವರು ಪ್ರಧಾನಿಯಾಗಿ ಪೀಠವನ್ನು ಅಲಂಕರಿಸಿದ ಆ ಕ್ಷಣ. ಗೋಡೆಯ ಮೇಲಿದ್ದ ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರ ಫೋಟೊ ಇರಲಿಲ್ಲ. ಇದೇಕೆ ತೆಗೆದಿದ್ದೀರಿ? ತಕ್ಷಣವೇ ಅವರ ಫೋಟೊ ಹಾಕಿ ಎಂದು ಸಂಬಂಧಿಸಿದವರಿಂದ ಕ್ಷಮೆಯಾಚನೆ ಮಾಡಿಸಿ ಮತ್ತೆ ನೆಹರೂ ಫೋಟೋ ಹಾಕಿಸಿದ ವ್ಯಕ್ತಿ. ಇನ್ಯಾರೂ ಅಲ್ಲ ಅವರೇ…

ದೇಶೀಯ ಕ್ರಿಕೆಟ್‌ನ ಶಕ್ತಿ: ಭಾರತದ ಪ್ರಮುಖ ಕ್ರಿಕೆಟ್ ಟೂರ್ನಿಗಳು ಯಾವುವು?

ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿದಂತೆ ಭಾರತದಲ್ಲಿ ನಡೆಯುವ ಪ್ರಮುಖ ದೇಶೀಯ ಕ್ರಿಕೆಟ್ ಟೂರ್ನಿಗಳ ವಿವರ, ಮಹತ್ವ ಮತ್ತು ಭಾರತೀಯ ಕ್ರಿಕೆಟ್‌ ನಲ್ಲಿ ಅವುಗಳ ಪಾತ್ರ – SuddiTV ವಿಶೇಷ. ಕ್ರಿಕೆಟ್ ಭಾರತದಲ್ಲಿ ಕೇವಲ ಒಂದು ಕ್ರೀಡೆ ಮಾತ್ರವಲ್ಲ, ಅದು ಒಂದು ಭಾವನೆ. ಅಂತರರಾಷ್ಟ್ರೀಯ ಕ್ರಿಕೆಟ್ ಜೊತೆಗೆ, ಭಾರತೀಯ…

ರಾಷ್ಟ್ರೀಯ ಗ್ರಾಹಕ ದಿನ: ಜಾಗೃತ ಗ್ರಾಹಕರೇ ಬಲಿಷ್ಠ ಭಾರತದ ಅಡಿಪಾಯ

ಪ್ರತಿ ವರ್ಷ ಡಿಸೆಂಬರ್ 24ರಂದು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ದಿನ (National Consumer Day) ಆಚರಿಸಲಾಗುತ್ತದೆ. ಗ್ರಾಹಕರ ಹಕ್ಕುಗಳು, ಜವಾಬ್ದಾರಿಗಳು ಮತ್ತು ಅವರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಈ ದಿನದ ಮುಖ್ಯ ಉದ್ದೇಶ. “ಜಾಗೃತ ಗ್ರಾಹಕ – ಶಕ್ತಿಶಾಲಿ ಮಾರುಕಟ್ಟೆ” ಎಂಬುದು ಈ ದಿನದ ತತ್ವ. ರಾಷ್ಟ್ರೀಯ ಗ್ರಾಹಕ ದಿನದ ಹಿನ್ನೆಲೆ ಆಕೆ…

ಟ್ರಾಫಿಕ್‌ಗೆ ಹೊಸ ‘ಪರ್ಯಾಯ ರಸ್ತೆ’ಗಳೆ? ಬೆಂಗಳೂರಿನ ಬಫರ್ ರಸ್ತೆ ಯೋಜನೆ—ಜನರ ದಾರಿ ಹೇಗೆ ಬದಲಾಗಬಹುದು?

ಬೆಂಗಳೂರು ನಗರದಲ್ಲಿ ರಾಜಕಾಲುವೆ/ಕೆರೆಗಳ ಬಫರ್‌ಝೋನ್‌ಗಳ ಪಕ್ಕದಲ್ಲಿ 300 ಕಿಮೀ ‘ಬಫರ್ ರಸ್ತೆಗಳ’ ನಿರ್ಮಾಣ ಯೋಜನೆ ವಿವರಗಳು ಮತ್ತು ಕೋರಮಂಗಲ– ಸರ್ಜಾಪುರ, ಈಜಿಪುರ–ಸರ್ಜಾಪುರ , ಬೆಳ್ಳಂದೂರು ಸೇರಿ ಪ್ರಮುಖ ಮಾರ್ಗಗಳ ಮೇಲೆ ಪರಿಣಾಮಗಳ ವಿಶ್ಲೇಷಣೆ. ಬಫರ್ ರಸ್ತೆ ಎಂದರೇನು? ಬೆಂಗಳೂರು ನಗರದಲ್ಲಿ ಮಳೆನೀರು ಹರಿವಿನ ಕಾಲುವೆ (ರಾಜಕಾಲುವೆ/stormwater drain) ಮತ್ತು ಕೆರೆಗಳ ತಡೆಗೋಡೆಗಳ ಪಕ್ಕದಲ್ಲಿ ಹೊಸ ರಸ್ತೆಗಳ…

ಅನಿಮಿಯಾ (Anemia)ವನ್ನು ಕೊನೆಗಾಣಿಸುವುದು ಹೇಗೆ? — ಕಾರಣ, ಪರಿಹಾರ ಮತ್ತು ರಾಜ್ಯ-ರಾಷ್ಟ್ರದ ವಸ್ತುಸ್ಥಿತಿ.

ದಣಿವು, ತಲೆಸುತ್ತು, ಉಸಿರಾಟ ಜಾಸ್ತಿ ಆಗುವುದು, ಮುಖ ಬಿಳಿಯಾಗುವುದು, ಕೈಕಾಲು ಚಳಿಯಾಗುವುದು… ಇವೆಲ್ಲ “ಸಾಮಾನ್ಯ” ಅಲ್ಲ. ಬಹುಸಾರಿ ಇದರ ಹಿಂದೆ ರಕ್ತಹೀನತೆ (ಅನಿಮಿಯಾ ) ಇರುತ್ತದೆ. ರಕ್ತಹೀನತೆಯನ್ನು ಸಾಮಾನ್ಯವಾಗಿ ಅನಿಮಿಯಾ ಎಂದು ಕರೆಯಲಾಗುತ್ತದೆ. ಇದು ರಕ್ತದಲ್ಲಿ ಹೀಮೋಗ್ಲೋಬಿನ್ (Hb) ಅಥವಾ ರಕ್ತಕಣಗಳ ಪ್ರಮಾಣ ಕಡಿಮೆಯಾಗಿರುವ ಸ್ಥಿತಿ. ಕೆಲಸ–ಓದು–ಆರೋಗ್ಯ–ಗರ್ಭಧಾರಣೆ–ಮಕ್ಕಳ ಬೆಳವಣಿಗೆ ಎಲ್ಲದರ ಮೇಲೂ ಇದು ನೇರ ಪರಿಣಾಮ…

ರಾಷ್ಟ್ರೀಯ ರೈತರ ದಿನ: ಬೇಕು ಅನ್ನದಾತನಿಗೆ ಗೌರವ, ಕೃಷಿಯ ಭವಿಷ್ಯಕ್ಕೆ ಚಿಂತನೆ

ಭಾರತ “ಕೃಷಿಪ್ರಧಾನ ದೇಶ”. ದೇಶದ ಆರ್ಥಿಕತೆ, ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನಶೈಲಿಯ ಮೂಲವೇ ಕೃಷಿ. ಎಷ್ಟೇ ವಿಜ್ಞಾನ – ತಂತ್ರಜ್ಞಾನ ಬೆಳವಣಿಗೆಯಾಗಿದೆ, ನಗರೀಕರಣವೇ ಆದ್ಯತೆಯಾಗಿದೆ ಎಂದರೂ ತಿನ್ನಲು ಅನ್ನವೇ ಬೇಕು. ಈ ಅನ್ನಕ್ಕೆ ರೈತನನ್ನೇ ಆಶ್ರಯಿಸಬೇಕು. ಈ ಕೃಷಿಕನಿಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಇಂತಹ ಕೃಷಿಕನಿಗಾಗಿ ಮಿಡಿದ ರೈತಪರ ನಾಯಕ ಭಾರತದ ಮಾಜಿ…

ಗಣಿತ ದಿನಾಚರಣೆ ವಿಶೇಷ | ಪ್ರತಿಭೆಗೆ ಸರಿಯಾದ ವೇದಿಕೆ ದೊರೆತರೆ, ಅದು ಜಾಗತಿಕವಾಗಿ ಮಿಂಚುತ್ತದೆ!

ಭಾರತೀಯ ಬೌದ್ಧಿಕ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ಕಾಲವನ್ನು ಮೀರಿಸಿ ನಿಲ್ಲುತ್ತವೆ. ಭಾರತೀಯರು ಗಣಿತಕ್ಕೆ ಕೊಟ್ಟ ಕೊಡುಗೆ ಅಪಾರ, ಅನನ್ಯ. ಶೂನ್ಯವನ್ನು ಕೊಟ್ಟ ಆರ್ಯಭಟ, ಬ್ರಹ್ಮಗುಪ್ತ, ೨ನೇ ಭಾಸ್ಕರನ ಕಾಲದಿಂದ ಇತ್ತೀಚಿನ ಶಕುಂತಲಾದೇವಿ, ಸಿ.ಆರ್.ರಾವ್, ಮಂಜುಳ್ ಭಾರ್ಗವ್ ವರೆಗೆ ಭಾರತೀಯರು ಗಣಿತಶಾಸ್ತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತ ಬಂದಿದ್ದಾರೆ. ಅಂತಹ ಒಂದು ಅಜರಾಮರ ಹೆಸರು ಶ್ರೀನಿವಾಸ ರಾಮಾನುಜನ್. ೨೦೧೨ರಿಂದ…

ಜೀವನದಲ್ಲಿ ಗಣಿತದ ಮಹತ್ವ: ಉದ್ಯೋಗಾವಕಾಶಗಳ ಗುರುತ್ವ

ಗಣಿತ (Mathematics) ಎಂಬುದು ಕೇವಲ ಅಂಕಿ–ಸಂಖ್ಯೆಗಳ ವಿಷಯವಲ್ಲ. ಅದು ಮಾನವನ ಚಿಂತನೆ, ತಾರ್ಕಿಕತೆ, ಸಮಸ್ಯೆ ಪರಿಹಾರ ಶಕ್ತಿ ಮತ್ತು ನಿರ್ಣಯ ಸಾಮರ್ಥ್ಯವನ್ನು ರೂಪಿಸುವ ಮೂಲ ಶಾಸ್ತ್ರವಾಗಿದೆ. ದಿನನಿತ್ಯದ ಬದುಕಿನಿಂದ ಹಿಡಿದು ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ ಹಾಗೂ ಆಡಳಿತವರೆಗೆ ಗಣಿತದ ಪ್ರಭಾವ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಜೀವನದಲ್ಲಿ ಗಣಿತದ ಮಹತ್ವ ಮತ್ತು ಅದರಿಂದ ಉಂಟಾಗುವ ಉದ್ಯೋಗಾವಕಾಶಗಳನ್ನು ಅರಿತುಕೊಳ್ಳುವುದು…