ಬೆಳಗಾವಿ: ಜಿಲ್ಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯನವರದ್ದು ರಾಕ್ಷಸ ಮುಖವಿದೆ. ಕಾಂಗ್ರೆಸ್ನವರು ಮೊದಲು ತಮ್ಮ ಮುಖ ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ನವರದ್ದು ರಾಕ್ಷಸ ಮುಖವೋ ಮನುಷ್ಯನ ಮುಖವೊ ಗೊತ್ತಾಗುತ್ತೆ. ಪರೇಶ್ನನ್ನು ಚಿತ್ರಹಿಂಸೆಕೊಟ್ಟು ಕೊಂದಿದ್ದಾರೆ. ಉತ್ತರ ಕರ್ನಾಟಕದ ಜನ ಶಾಂತಿಪ್ರಿಯರು. ಪರೇಶ್ ಸಾವು ಮಾನವೀಯತೆಯ ಕಗ್ಗೊಲೆ. ವ್ಯವಸ್ಥಿತವಾಗಿ ಕೇಸ್ ಮುಚ್ಚಿ ಹಾಕಲಾಗುತ್ತಿದೆ. ನ್ಯಾಯಯುತ ತನಿಖೆ ಮಾಡುವ ಮನಸ್ಸು ಕಾಂಗ್ರೆಸ್ಸಿಗಿಲ್ಲ. ಅಲ್ಪಸಂಖ್ಯಾರ ಮತಗಳ ತುಷ್ಠಿಕರಣವಿದು. ಅಲ್ಲಿನ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಸಿ.ಪಿ.ಐ, ಪಿ.ಎಸ್.ಐ ಪೊಲೀಸ್ ಅಧಿಕಾರಿಗಳು ಸಮಾಜ ಘಾತುಕ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ. ರಾಜ್ಯ ಸರ್ಕಾರದಿಂದ ನಮಗೆ ನ್ಯಾಯ ಸಿಗುವ ಭರವಸೆಯಿಲ್ಲ. ರಾಜ್ಯದಲ್ಲಿ ಪರೇಶ್ ಸೇರಿ 20 ಜನರ ಕಗ್ಗೊಲೆ ಆಗಿದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ತನಿಖೆ ನಡೆಸಲು ಕೇಂದ್ರ ಸಚಿವರು ಆಗ್ರಹ ಮಾಡಿದ್ದಾರೆ.